Advertisement

ಕೋಲಿ ಸಮಾಜ ಪ್ರಗತಿ ಕಾಣಲಿ

02:38 PM Aug 30, 2018 | |

ಶಹಾಪುರ: ಬಹು ಸಂಖ್ಯಾತರಾಗಿದ್ದ ಕೋಲಿ ಸಮಾಜ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸಮಾಜದ ಪ್ರಮುಖರು ಶೈಕ್ಷಣಿಕವಾಗಿ ಪ್ರಗತಿಯತ್ತ ಸಾಗುವ ಯೋಜನೆ ರೂಪಿಸುವ ಮೂಲಕ ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

Advertisement

ನಗರದ ಹಳಿಸಗರ ಭಾಗದ ನಿಜಶರಣ ಅಂಬಿಗರ ಚೌಡಯ್ಯನವರ ಮಠದ ಆವರಣದಲ್ಲಿ ತಾಲೂಕು ಕೋಲಿ
ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ನೂತನ ಶಾಸಕರಿಗಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪ್ರಸ್ತುತ ಬದಲಾಗುತ್ತಿರುವ ಸಮಾಜದಲ್ಲಿ ಕೋಲಿ ಸಮಾಜದ ಬಂಧುಗಳು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಮುನ್ನಡೆಗೆ ಶ್ರಮಿಸಬೇಕು. ನನ್ನ ಅವಧಿಯಲ್ಲಿ ಅಂದಾಜು ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬೃಹತ್‌ (ಕೋಲಿ) ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಭವನ ನಿರ್ಮಿಸುವ ಭರವಸೆ ನೀಡಿದರು.

ಕೆ.ಎ.ಎಸ್‌ ಅಧಿಕಾರಿಯಾಗಿ ಆಯ್ಕೆಯಾಗಿರುವ ಡಾ| ಎಂ.ಎಸ್‌. ಶಿರವಾಳ ಮಾತನಾಡಿ, ಸತತ ಅಧ್ಯಯನದಿಂದ
ಮಾತ್ರ ಉನ್ನತ ಹುದ್ದೆಗೆ ಏರಲು ಸಾಧ್ಯ. ನಮ್ಮ ತಂದೆಯವರು ಅನಕ್ಷರಸ್ಥರಾಗಿದ್ದರೂ ಸಹಿತ ನನಗೆ ಸದಾಕಾಲ ಚೆನ್ನಾಗಿ ಓದುವಂತೆ ಪ್ರೇರೇಪಣೆ ನೀಡುವುದರ ಜೊತೆಗೆ ಸಾಲ ಮಾಡಿಯಾದರೂ ಉತ್ತಮ ಪುಸ್ತಕಗಳನ್ನು ಕೊಡಿಸುತ್ತಿದ್ದರು. 

ಅವರ ಈ ಪ್ರೋತ್ಸಾಹದಿಂದಲೇ ಈ ಸಾಧನೆ ಸಾಧ್ಯವಾಯಿತು. ಮುಂದೆ ಸಂದರ್ಭಾನುಸಾರ ಕಾನೂನಿನಡಿಯಲ್ಲಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಎ.ಪಿ.ಎಂ.ಸಿ. ಕಾರ್ಯದರ್ಶಿ ರಂಗನಾಥ ದೇಸಾಯಿ ಮಾತನಾಡಿ, ಸಮಾಜ ಬಾಂಧವರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮಾಜದ ಸಂಘಟನೆಗೆ
ಮುಂದಾಗಬೇಕು. ಸಮಾಜದ ಬೆಳವಣಿಗೆಗೆ ಯುವ ಸಮುದಾಯ ಟೊಂಕಕಟ್ಟಿ ನಿಲ್ಲಬೇಕು. ಯುವಕರಿಂದ ಯಾವ
ಕೆಲಸವಾದರೂ ಸಾಧ್ಯವಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂದರು.

Advertisement

ಕ್ಷೇತ್ರ ಶಿಕ್ಷಣಾಧಿಕಾರಿ ಹಣಮಂತಪ್ಪ ನಾಟೇಕಾರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ| ಎಸ್‌.ಕೆ. ಟಕ್ಕಳಕಿ ಅವರನ್ನು ಸನ್ಮಾನಿಸಲಾಯಿತು. ಮಲ್ಲಪ್ಪ ಬಗಲಿ ಅಧ್ಯಕ್ಷತೆ ವಹಿಸಿದ್ದರು. ಮಹಾದೇವಪ್ಪ ಸಾಲಿಮನಿ, ಸುರೇಶ
ತಡಿಬಿಡಿ, ಗೋಪಾಲ ಸುರಪುರ, ರಾಮಣ್ಣ ನಯ್ಕೋಡಿ, ಮಾನಪ್ಪ ಸೂಗೂರ, ಸಣ್ಣ ನಿಂಗಪ್ಪ ನಯ್ಕೋಡಿ, ಅಯ್ಯಣ್ಣ ಕನ್ಯೆಕೋಳೂರ, ಮರೆಣ್ಣ ಮಿಲಿ, ನಾಗಪ್ಪ ತಹಶೀಲ್ದಾರ್‌, ರಾಮಾಂಜನೇಯ, ಶಾಂತಪ್ಪ ಗೊಂದೆನೂರ, ಮಲ್ಕಪ್ಪ
ನಾಶಿ, ದೇವಿಂದ್ರಪ್ಪ ದೊಡ್ಡಮನಿ, ಯಮನಪ್ಪ ಚಿಗರಿ ಇದ್ದರು. ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ
ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರೋತ್ಸಾಹಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next