Advertisement

ಲಿಂಗಾಯತ ಕೋಟಾದಡಿ ಅಧಿಕಾರ ಪಡೆದ ಬಿಜೆಪಿಗರು ಜಾಥಾಕ್ಕೆ ಬರಲಿ

07:40 AM Nov 02, 2017 | Team Udayavani |

ಧಾರವಾಡ: ಲಿಂಗಾಯತ ಧರ್ಮದ ಕೋಟಾದಡಿ ಅಧಿಕಾರ ಅನುಭವಿಸಿದ ಬಿಜೆಪಿ ಮುಖಂಡರು ಯಾವುದೇ ಆಹ್ವಾನಕ್ಕೆ ಕಾಯದೇ ನ.5ರಂದು ಹುಬ್ಬಳ್ಳಿಯಲ್ಲಿ ನಡೆಯುವ ಲಿಂಗಾಯತ ಸ್ವತಂತ್ರ ಧರ್ಮ ರ್ಯಾಲಿಯಲ್ಲಿ ಪಾಲ್ಗೊಳ್ಳಬೇಕು ಎಂದು ಉಸ್ತುವಾರಿ ಸಚಿವ, ರಾಷ್ಟ್ರೀಯ ಬಸವ ಸೇನಾ ಅಧ್ಯಕ್ಷ ವಿನಯ್‌ ಕುಲಕರ್ಣಿ ಹೇಳಿದರು.

Advertisement

ಇಲ್ಲಿನ ರಾಜ್ಯೋತ್ಸವ ಕಾರ್ಯಕ್ರಮ ಬಳಿಕ ಮಾತನಾಡಿ, ಬಿಜೆಪಿಯಲ್ಲಿ ಅನೇಕ ಜನರು ಲಿಂಗಾಯತ ಕೋಟಾದಡಿ ಬಿ ಫಾರ್ಮ್ ಪಡೆದಿದ್ದಾರೆ. ಎಂಎಲ್‌ಎ ಆಗಿದ್ದಾರೆ, ಸಚಿವರಾಗಿದ್ದಾರೆ ಅಷ್ಟೇಯಲ್ಲ, ರಾಜ್ಯದ ಸಿಎಂ ಕೂಡ ಆಗಿದ್ದಾರೆ. ಅವರ ಮೇಲೆ ಲಿಂಗಾಯತ ಸಮುದಾಯದ ಋಣ ಇದ್ದು, ಇದನ್ನು ತೀರಿಸಲು ಅವರು ಯಾವುದೇ ಆಹ್ವಾನಕ್ಕೂ ಕಾಯುವ ಅಗತ್ಯವಿಲ್ಲ ಎಂದರು.

ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ: ಖಾಸಗಿ ಕಂಪನಿಗಳಿಗೆ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮತ್ತೂಮ್ಮೆ ಚರ್ಚಿಸಲಾಗುವುದು ಎಂದು ಸಚಿವ ವಿನಯ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next