Advertisement

ಬಿಎಸ್‌ವೈ ಚರ್ಚೆಗೆ ಬರಲಿ 

06:45 AM Jun 30, 2018 | Team Udayavani |

ಬೆಂಗಳೂರು: ಜಲ ಸಂಪನ್ಮೂಲ ಇಲಾಖೆಯಲ್ಲಿ ಬಿಲ್‌ ಪಾವತಿಗೆ ಕಮಿಷನ್‌ ಪಡೆಯಲಾಗುತ್ತಿದೆ ಎಂಬ ಪ್ರತಿಪಕ್ಷ ನಾಯಕ ಬಿ.ಎಸ್‌ .ಯಡಿಯೂರಪ್ಪ ಅವರ ಹೇಳಿಕೆಗೆ ಗರಂ ಆಗಿರುವ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌,
“ನಾನೇನು ಯಾವುದೇ ಚೆಕ್‌ ಮೂಲಕ ಹಣ ಪಡೆದುಕೊಂಡಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.

Advertisement

ಕಮಿಷನ್‌ ಪಡೆದಿರುವ ಬಗ್ಗೆ ಯಡಿಯೂರಪ್ಪ ಅವರ ಬಳಿ ದಾಖಲೆ ಇದ್ದರೆ, ಎಸಿಬಿ ಅಥವಾ ಆದಾಯ ತೆರಿಗೆ
ಇಲಾಖೆಗೆ ದೂರು ಕೊಡಲಿ ಎಂದು ಸವಾಲು ಹಾಕಿದರು. ನಾನು ಇನ್ನೂ ಇಲಾಖೆಯಲ್ಲಿ ಕಣ್ಣೇ ಬಿಟ್ಟಿಲ್ಲ. ಬಿಲ್‌ ಕ್ಲಿಯರ್‌ ಮಾಡಲು ಕೈ ಹಾಕಿಲ್ಲ.ಆಗಲೇ ಯಡಿಯೂರಪ್ಪ ಅವರಿಗೆ ಕನಸು ಬೀಳುತ್ತಿದೆ. ಈ ಬಗ್ಗೆ ಅವರು ವಿಧಾನಸೌಧದಲ್ಲಿ
ಬಹಿರಂಗ ಚರ್ಚೆಗೆ ಬರಲಿ. ನನಗೆ ಏನೇನು ಚಿತ್ರ ಹಿಂಸೆ ಕೊಡಬೇಕೋ ಕೊಡಲಿ, ಎದುರಿಸುವ ಶಕ್ತಿ ಇದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next