Advertisement

Challenges: ಸವಾಲುಗಳು ಇರುವುದು ಎದುರಿಸಲಿಕ್ಕೆ

01:16 PM Oct 15, 2023 | Team Udayavani |

ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಸಮಸ್ಯೆಗಳು ಬಂದಾಗ ಅದರ ಬಗ್ಗೆ ಚಿಂತಿಸುತ್ತಾ ಹತಾಶರಾಗದೆ. ಅದನ್ನು ಧೈರ್ಯದಿಂದ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕಿದೆ.

Advertisement

ಸಮಸ್ಯೆಯಿಂದ ತೊಳಲಾಡಿದ ವ್ಯಕ್ತಿಯೊಬ್ಬ ಜೀವನದಲ್ಲಿ ತುಂಬಾ ಜುಗುಪ್ಸೆ ಹೊಂದಿದ್ದ. ಅವನಿಗೆ ತನ್ನ ಸ್ಥಿತಿಯ ಬಗ್ಗೆ ನೆನೆದರೆ ಕೋಪ ಬರುತ್ತಾ ಇತ್ತು. ನನಗೆ ಮಾತ್ರ ಏಕೆ ಹೀಗಾಗುತ್ತಿದೆ ಎಂದು ಯೋಚಿಸಿ ತಲೆ ಕೆಡಿಸಿಕೊಂಡಿದ್ದನು. ನನ್ನ ಸಮಸ್ಯೆಗೆ ಝೆನ್‌ ಗುರುಗಳನ್ನು ಕಂಡರೆ ಪರಿಹಾರ ಸಿಗಬಹುದೆಂದು ತೀರ್ಮಾನಿಸಿ ಝೆನ್‌ ಗುರು ಓರ್ವರನ್ನು ಭೇಟಿಯಾದನು. ಝೆನ್‌ ಗುರುಗಳಿಗೆ ಅವನ ಮುಖ ನೋಡಿದಾಗಲೇ ತುಂಬಾ ಸಮಸ್ಯೆ ಇರುವಂತೆ ತೋರಿತ್ತು. ಅವನು ಗುರುಗಳ ಹತ್ತಿರ “ಗುರುಗಳೇ ನನಗೆ ಜೀವನ ಸಾಕಾಗಿದೆ. ನನಗೆ ಏನಾಗಿದೆ, ನಾನು ಯಾರು?’ ಎಂದು ಬಡಬಡಿಸುತ್ತಿದ್ದ. ಗುರುಗಳು ಏನೂ ಮಾತನಾಡಲಿಲ್ಲ. ಆ ವ್ಯಕ್ತಿಯು ಗುರುಗಳ ಹತ್ತಿರ “ನನ್ನ ಸಮಸ್ಯೆಗೆ ಪರಿಹಾರ ಒದಗಿಸಿ’ ಎಂದು ಬೇಡಿಕೊಂಡ. ಆದರೆ ಗುರುಗಳು ಒಂದು ಮಾತನ್ನೂ ಆಡಲಿಲ್ಲ. ಆ ವ್ಯಕ್ತಿಗೆ ತುಂಬಾ ಕೋಪ ಬಂತು. ಗುರುಗಳ ಹತ್ತಿರ ಪರಿಹಾರ ದೊರಕುವುದಿಲ್ಲ ಎಂದು ಭಾವಿಸಿ ನನ್ನ ಸಮಸ್ಯೆಯನ್ನು ನಾನೇ ಎದುರಿಸುತ್ತೇನೆ. ಇವರ ಸಹಾಯ ನನಗೆ ಬೇಕಾಗಿಲ್ಲ ಎಂಬ ಛಲದಿಂದ ಎದ್ದು ಹೊರನಡೆದನು.

ಆಗ ಗುರುಗಳು ಆತ ನ‌ನ್ನು ಕರೆದು ಅವನ ಮುಖವನ್ನು ದಿಟ್ಟಿಸಿ ನೋಡುತ್ತಾ “ಈಗ ನಿನಗೆ ಎಲ್ಲ ಸವಾಲುಗಳನ್ನು ಎದುರಿಸುತ್ತೇನೆ ಎಂಬ ಛಲ ಬಂತು ಅಲ್ಲವೇ? ನಿನಗೆ ನೀನು ಯಾರು, ನಿನ್ನ ಶಕ್ತಿ ಏನು ಎಂಬುದು ತಿಳಿಯಿತು. ಆದ್ದರಿಂದ ಇನ್ನು ನಿನ್ನ ಸಮಸ್ಯೆ ಪರಿಹಾರವಾಗುವುದು’ ಎಂದರು.

ಜುಗುಪ್ಸೆ ಎಂಬುದು ಗೆದ್ದಲಿನಂತೆ. ಒಮ್ಮೆ ಮನಸ್ಸಿಗೆ ಆವರಿಸಲಾರಂಭಿಸಿದರೆ ಸಂಪೂರ್ಣವಾಗಿ ಪಸರಿಸುತ್ತದೆ. ಹಾಗಾಗಿ ಜುಗುಪ್ಸೆಗೊಳಗಾಗದಂತೆ ನಮಗೆ ನಾವೇ ಎಚ್ಚರಿಕೆ ವಹಿಸುವುದು ಅಗತ್ಯಗತ್ಯ. ಜೀವನದಲ್ಲಿ ಒಂದು ನಿರ್ದಿಷ್ಟ ಗುರಿ ಇರಬೇಕು. ಆ ಗುರಿ ಸಾಧಿಸುವ ಛಲ ನಮ್ಮಲ್ಲಿದ್ದಾಗ ಎಂತಹ ಸಾಧನೆಯನ್ನು ಕೂಡ ಮಾಡಬಹುದು.

ಕ್ರಿಕೆಟ್‌ ನಲ್ಲಿ ಬ್ಯಾಟ್ಸ್‌ ಮನ್‌ ಓರ್ವ ಶತಕ ಬಾರಿಸಿದರೆ, ಓರ್ವ ಬೌಲರ್‌ ನೂರು ವಿಕೆಟ್‌ ಕಿತ್ತರೆ ಅದು ಆತನ ಸಾಧನೆಗೆ ಒಂದು ಗರಿ ಮೂಡಿದಂತೆ. ಇತಿಹಾಸ ಸೃಷ್ಟಿಸಿದಂತೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next