Advertisement

World Cup; ಹುಡುಗರೇ… ಶತಕೋಟಿ ಅಭಿಮಾನಿಗಳಿಗಾಗಿ ಗೆಲ್ಲಿ : ಪಾಂಡ್ಯ ಪೋಸ್ಟ್

07:50 PM Nov 18, 2023 | Team Udayavani |

ಅಹಮದಾಬಾದ್‌: ಆಸ್ಟ್ರೇಲಿಯ ವಿರುದ್ಧದ ವಿಶ್ವಕಪ್ 2023 ರ ಫೈನಲ್ ಪಂದ್ಯದ ಮೊದಲು ಹಾರ್ದಿಕ್ ಪಾಂಡ್ಯ ತಮ್ಮ ಸಹ ಆಟಗಾರರಿಗಾಗಿ ವಿಶೇಷ ಸಂದೇಶವನ್ನು ಪೋಸ್ಟ್ ಮಾಡಿ ಶತಕೋಟಿ ಅಭಿಮಾನಿಗಳಿಗಾಗಿ ಕಪ್ ಗೆಲ್ಲುವಂತೆ ಟೀಮ್ ಇಂಡಿಯಾವನ್ನು ಹುರಿದುಂಬಿಸಿದ್ದಾರೆ.

Advertisement

“ಹುಡುಗರೇ, ಈ ತಂಡದ ಬಗ್ಗೆ ನನಗೆ ಹೆಚ್ಚು ಹೆಮ್ಮೆ ನಾವು ಇಲ್ಲಿಯವರೆಗೆ ಬಂದಿದ್ದೇವೆ. ನಾವು ಎಷ್ಟು ದೂರ ಸಾಗಿ ಬಂದಿದ್ದೇವೆ ಎಂಬುದು ನಮ್ಮ ಹಿಂದಿನ ವರ್ಷಗಳ ಪರಿಶ್ರಮಕ್ಕೆ ಕ್ರೆಡಿಟ್ ಆಗಿದೆ. ನಾವು ಈಗ ವೈಭವದಿಂದ ಒಂದು ಹೆಜ್ಜೆ ಮಾತ್ರ ದೂರದಲ್ಲಿದ್ದೇವೆ. ನಾವು ವಿಶೇಷವಾದದ್ದನ್ನು ಮಾಡುವ ಕನಸು ಚಿಕ್ಕಂದಿನಿಂದಲೂ ಕಂಡಿದ್ದೇವೆ. ನಮಗಾಗಿ ಮಾತ್ರವಲ್ಲದೆ ನಮ್ಮ ಹಿಂದೆ ಇರುವ ಶತಕೋಟಿ ಜನರಿಗಾಗಿ ಕಪ್ ಎತ್ತಬೇಕು. ಯಾವಾಗಲೂ ನಿಮ್ಮೊಂದಿಗೆ ನನ್ನ ಪೂರ್ಣ ಹೃದಯದ ಪ್ರೀತಿ ಇದೆ. ಕಪ್ ಅನ್ನು ಮನೆಗೆ ತರೋಣ. ಜೈ ಹಿಂದ್” ಎಂದು ಪಾಂಡ್ಯ ಎಕ್ಸ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು 2023 ರ ಕ್ರಿಕೆಟ್ ವಿಶ್ವಕಪ್‌ನ ಮಧ್ಯದಲ್ಲಿ ಗಾಯದ ಕಾರಣ ಹೊರಗುಳಿದಿದ್ದರಿಂದ ದೊಡ್ಡ ಮಟ್ಟದ ನೋವಿಗೆ ಗುರಿಯಾಗಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ, ಎಡ ಪಾದದ ಗಾಯದ ನಂತರ ಮೈದಾನದಿಂದ ಹೊರಗುಳಿಯಬೇಕಾಯಿತು. ದುರದೃಷ್ಟ ಎಂಬಂತೆ ಗಾಯದ ಗಂಭೀರತೆಯು ವಿಶ್ವಕಪ್‌ನಲ್ಲಿ ಅವರ ಪ್ರಯಾಣವನ್ನು ಅಕಾಲಿಕವಾಗಿ ಅಂತ್ಯ ಗೊಳಿಸುವಂತೆ ಮಾಡಿತು. ಅವರ ಜಾಗಕ್ಕೆ ಬಂದ ಶಮಿ ಅವಕಾಶವನ್ನು ಭರಪೂರವಾಗಿ ಬಳಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next