Advertisement

ಮಹಿಳಾ ಸಮಾನತೆ, ಕನ್ನಡದ ಪ್ರಾಮಾಣಿಕ ಸೇವೆಗೆ ಅವಕಾಶ ನೀಡಿ: ಶಾರದಾ ಭಟ್

01:18 PM Nov 19, 2021 | Team Udayavani |

ದಾಂಡೇಲಿ: ಮಹಿಳೆಯರಿಗೆ ಪ್ರಾತಿನಿಧ್ಯ ಸಿಗಬೇಕು. ಆ ಮೂಲಕ ಮಹಿಳಾ ಸಮಾನತೆಯ ಜೊತೆಗೆ ಪಾರದರ್ಶಕವಾಗಿ ಹಾಗೂ ಪ್ರಾಮಾಣಿಕವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ಮುನ್ನಡೆಸಿಕೊಂಡು ಹೋಗಬೇಕೆಂಬ ಉತ್ಕಟ ಬಯಕೆ ಹಾಗೂ ಹಿರಿ ಕಿರಿಯರ ಅಪೇಕ್ಷೆಯಂತೆ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಈ ನಿಟ್ಟಿನಲ್ಲಿ ಮಹಿಳಾ ಸಮಾನತೆಯ ಜೊತೆಗೆ ಕನ್ನಡದ ಪ್ರಾಮಾಣಿಕ ಸೇವೆಗೆ ಮಹತ್ವದ ಅವಕಾಶವನ್ನು ನೀಡಬೇಕೆಂದು ಜಿಲ್ಲಾ ಕಸಾಪ ಅಧ್ಯಕ್ಷಿಯ ಸ್ಥಾನದ ಅಭ್ಯರ್ಥಿ ಹಾಗೂ ಹಿರಿಯ ಸಾಹಿತಿ ಶಾರದಾ ಭಟ್ ಅವರು ಮನವಿ ಮಾಡಿದ್ದಾರೆ.

Advertisement

ನಗರಕ್ಕೆ ಆಗಮಿಸಿದ ಅವರು ಮಾಧ್ಯಮದ ಮೂಲಕ ಕಸಾಪ ಅಜೀವ ಸದಸ್ಯರು ತಮ್ಮ ಪವಿತ್ರ ಅಮೂಲ್ಯ ಮತವನ್ನು ನೀಡಿ ಕನ್ನಡದ ಸೇವೆ ಮಾಡಲು ಅವಕಾಶವನ್ನು ಒದಗಿಸಿಕೊಡಬೇಕೆಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next