Advertisement

ವಿದ್ಯಾರ್ಥಿಗಳು ಸಂಚಾರಿ ನಿಯಮ ತಿಳಿಯಲಿ

09:01 PM Mar 25, 2021 | Team Udayavani |

ಸಿದ್ದಾಪುರ: ಅಪರಾಧ ಕಾರ್ಯ, ರಸ್ತೆ ಸುರಕ್ಷತೆ ಮುಂತಾಗಿ ಹಲವು ಸಂಗತಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು, ಜಾಗೃತಿ ಮೂಡಿಸುವ ತೆರೆದ ಮನ ಎನ್ನುವ ಕಾರ್ಯಕ್ರಮ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ನಡೆಯಿತು.

Advertisement

ಠಾಣೆಗೆ ಆಗಮಿಸಿದ ಸ್ಥಳೀಯ ಸಿದ್ಧಿವಿನಾಯಕ ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಿಪಿಐ ಮಹೇಶ್‌ ಎನ್‌ ತಿಳಿವಳಿಕೆ ನೀಡಿ ಅಪರಾಧ ಕಾರ್ಯಗಳಲ್ಲಿ ಭಾಗಿಯಾಗದಿರುವುದರ ಬಗ್ಗೆ, ಅಪರಾಧ ಕಾರ್ಯಗಳು ನಡೆದಲ್ಲಿ ಅದನ್ನು ಆರಕ್ಷಕರಿಗೆ ತಿಳಿಸುವುದರ ಬಗ್ಗೆ. ಸೈಬರ್‌ ಅಪರಾಧದ ಬಗ್ಗೆ, ರಸ್ತೆ ಸುಕ್ಷತಾ ನಿಯಮಗಳು ಮತ್ತು ಅದನ್ನು ಪಾಲನೆ ಮಾಡುವುದರ ಬಗ್ಗೆ ವಿವರಿಸಿದರು.

ಪಿಎಸ್‌ಐ ಮಹಂತೇಶ್‌ ಹಲವು ಮುಖ್ಯವಾದ ಸೂಚನೆಗಳನ್ನು ನೀಡಿದರು. ಪ್ರೌಢಶಾಲಾ ಮುಖ್ಯಾಧ್ಯಾಪಕ ಸಂತೋಷ್‌ ಹಾಗೂ ಶಿಕ್ಷಕಿಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next