Advertisement

ಸರ್ಕಾರದ ಯೋಜನೆ ಜನರಿಗೆ ತಿಳಿಸುವ ಕೆಲಸವಾಗಲಿ

09:28 AM Apr 25, 2022 | Team Udayavani |

ಹುಬ್ಬಳ್ಳಿ: ದೇಶದಲ್ಲಿ ಯಾವ ಪಕ್ಷಕ್ಕೂ ಬಲಾಡ್ಯ ನೇತೃತ್ವ, ಸಿದ್ಧಾಂತ, ದೃಷ್ಟಿಕೋನವಿಲ್ಲ. ಆದರೆ ಬಿಜೆಪಿಗೆ ನರೇಂದ್ರ ಮೋದಿ ಎನ್ನುವ ಅದ್ಭುತ ನಾಯಕತ್ವವಿದೆ. 2024ರಲ್ಲಿ ಇದಕ್ಕಿಂತ ಹೆಚ್ಚಿನ ಬಹುಮತದಿಂದ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ. ಕೇಂದ್ರ, ರಾಜ್ಯ ಸರಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ರವಿವಾರ ಮೂರುಸಾವಿರ ಮಠದ ಜಗದ್ಗುರು ಮೂಜಗಂ ಸಭಾಭವನದಲ್ಲಿ ಬಿಜೆಪಿ ಬೂತ್‌ ಸಶಕ್ತೀಕರಣ, ಬೂತ್‌ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿನ ಗೆಲುವಿಗೆ ವ್ಯವಸ್ಥಿತ ನಿರ್ವಹಣೆ, ಮೋದಿಯವರ ಜನಪ್ರಿಯತೆ ಕಾರಣವಾಗಿದೆ. ಮತದಾರರನ್ನು ಮತಗಟ್ಟೆಗೆ ಕರೆದುಕೊಂಡು ಬರಬೇಕು. ಇದಕ್ಕಾಗಿ ಬೂತ್‌ ಗಳನ್ನು ಸಶಕ್ತೀಕರಣ ಮಾಡಬೇಕು ಎಂದರು.

ಮಾಜಿ ಶಾಸಕ ಅಶೋಕ ಕಾಟವೆ ಮಾತನಾಡಿ, ಕ್ಷೇತ್ರದಿಂದ ಸ್ಪರ್ಧಿಸಲು ನಾಲ್ಕೈದು ಜನರು ಆಪೇಕ್ಷಿತರಿದ್ದಾರೆ. ಆಕಾಂಕ್ಷಿಗಳು ಕಾಲಿಗೆ ಚಕ್ರ ಕಟ್ಟಿಕೊಡು ಪಕ್ಷ ಬಲಪಡಿಸುವ ಕೆಲಸ ಮಾಡಬೇಕು. ಅವರ ಕೆಲಸ ನೋಡಿ ಪಕ್ಷ ಟಿಕೆಟ್‌ ನೀಡಲಿದೆ. ಘೋಷಣೆಯಾದ ನಂತರ ಕೆಲಸ ಮಾಡುತ್ತೇನೆ ಎನ್ನುವ ಮನಸ್ಥಿತಿ ಬಿಡಬೇಕು. ಎಐಎಂಐಎಂ ಪಕ್ಷ ಈ ಬಾರಿ 10-15 ಸಾವಿರ ಮತಗಳನ್ನು ಪಡೆದರೆ ಪಕ್ಷದ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಹೇಳಿದರು.

ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ ಮಾತನಾಡಿ, ಆರು ತಿಂಗಳ ಮೊದಲು ಅಭ್ಯರ್ಥಿ ಘೋಷಣೆ ಮಾಡಿದರೆ ನಾಯಕರು, ಕಾರ್ಯಕರ್ತರು ಶ್ರಮಿಸಿ ಗೆಲ್ಲಿಸುತ್ತೇವೆ. ಕೊನೆಯ ಹಂತದಲ್ಲಿ ಅಭ್ಯರ್ಥಿ ಘೋಷಣೆ ಮಾಡಿದರೆ ಚುನಾವಣೆ ನಡೆಸಲು ಕಷ್ಟವಾಗುತ್ತದೆ ಎಂದರು.

Advertisement

ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿದರು, ಮುಖಂಡರಾದ ಲಿಂಗರಾಜ ಪಾಟೀಲ, ನಾಗೇಶ ಕಲಬುರ್ಗಿ, ರಂಗಾ ಬದ್ದಿ, ಚಂದ್ರಶೇಖರ ಗೋಕಾಕ, ದತ್ತಮೂರ್ತಿ ಕುಲಕರ್ಣಿ, ತಿಪ್ಪಣ್ಣ ಮಜ್ಜಗಿ, ಡಿ.ಕೆ. ಚವ್ಹಾಣ, ಬಸವರಾಜ ಅಮ್ಮಿನಬಾವಿ, ಡಾ| ಕ್ರಾಂತಿಕಿರಣ, ರಾಜು ಜರತಾಘರ, ಪ್ರತಿಭಾ ಪವಾರ, ರಾಧಾಬಾಯಿ ಸಫಾರೆ, ಪೂಜಾ ಶೇಜವಾಡಕರ, ಪ್ರೀತಿ ಲದ್ವಾ, ಶಾಂತಬಾಯಿ ಹಿರೇಮಠ ಇನ್ನಿತರರಿದ್ದರು.

ಸಮಾಜಘಾತುಕ ಶಕ್ತಿ ಅಡಗಿಸಲು ಅಧಿಕಾರಕ್ಕೆ ಬರಬೇಕು’: ಪೂರ್ವ ಕ್ಷೇತ್ರದ ಆಕಾಂಕ್ಷಿಗಳೆಲ್ಲರಿಗೂ ಕಾರ್ಯ ಹಂಚಿಕೆ ಮಾಡಬೇಕು. ಪ್ರತಿಯೊಬ್ಬರ ಪ್ರಗತಿ ಪರಿಶೀಲಿಸಿ ಹಿಂದೆ ಉಳಿದವರನ್ನು ಈಗಿನಿಂದಲೇ ಕೈಬಿಡುವ ಕೆಲಸ ಆಗಬೇಕು. ಮನೆಯಲ್ಲಿ ಕುಳಿತರೆ ಆಗುವುದಿಲ್ಲ. ಯಾವ ಯೋಜನೆಗಳ ಕುರಿತು ಎಷ್ಟು ಜನರಿಗೆ ಮಾಹಿತಿ ನೀಡಿದ್ದೀರಿ. 50 ಕ್ಕಿಂತ ಹೆಚ್ಚು ಹಾಗೂ ಕಡಿಮೆ ಬಂದಿರುವ ಬೂತ್‌ ಗುರುತಿಸಿ ಎರಡಕ್ಕೂ ಕಾರಣ ಹುಡುಕಿ ಕೆಲಸ ಮಾಡಬೇಕು. ಸಮಾಜಘಾತುಕ ಶಕ್ತಿ ಅಡಗಿಸಲು ಅಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು. ಒಂದು ವರ್ಷದ ಮೊದಲು ಅಭ್ಯರ್ಥಿ ಘೋಷಿಸಿದರೆ ಅವನನ್ನು ಸೋಲಿಸಲು ಪ್ರಯತ್ನಗಳೇ ಹೆಚ್ಚಾಗುತ್ತವೆ ಎಂದು ಕಾರ್ಯಕರ್ತರಿಗೆ, ಮುಖಂಡರಿಗೆ ಸಚಿವ ಪ್ರಹ್ಲಾದ ಜೋಶಿ ಕ್ಲಾಸ್‌ ತೆಗೆದುಕೊಂಡರು.

ಪೂರ್ವ ವಿಧಾನಸಭಾ ಕ್ಷೇತ್ರದ 216 ಬೂತ್‌ಗಳ ಪೈಕಿ 169ರಲ್ಲಿ ಸದಸ್ಯತ್ವ ಅಭಿಯಾನ ಪೂರ್ಣಗೊಂಡಿದೆ. ಉಳಿದ ಪ್ರದೇಶಗಳಲ್ಲಿ ಅಲ್ಪಸಂಖ್ಯಾತರು ಎನ್ನುವ ಕಾರಣಕ್ಕೆ ಹಿಂದೇಟು ಹಾಕುವ ಬದಲು ಪಕ್ಷದ ಅಲ್ಪಸಂಖ್ಯಾತ ಮೋರ್ಚಾ ಮುಂದಾಳತ್ವದಲ್ಲಿ ಸದಸ್ಯತ್ವ ಅಭಿಯಾನ ಪೂರ್ಣಗೊಳಿಸಬೇಕು. –ಸಂಜಯ ಕಪಟಕರ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next