Advertisement

ಜಾನಪದ ಆಚರಣೆ ಜೀವಂತವಿರಲಿ

03:03 PM Nov 07, 2021 | Shwetha M |

ವಿಜಯಪುರ: ಭಾರತೀಯರ ಸಂಸ್ಕೃತಿ ಹಾಗೂ ಸಮಾಜದ ಮೇಲೆ ಪಾಶ್ಚಾತ್ಯರು ಎಷ್ಟೇ ಪ್ರಭಾವ ಬೀರಿದರೂ ಸಹಿತ ಅವರ ಸಂಸ್ಕೃತಿ ಮುಂದೆ ನಮ್ಮ ಜಾನಪದ ರಶ್ಮಿಗಳು ಬಲಿಷ್ಠವಾಗಿ ನಿಲ್ಲಬಲ್ಲವು ಎಂದು ಆರೋಗ್ಯ ಇಲಾಖೆಯ ಜಿಲ್ಲಾ ಫ್ಲೋರೋಸಿಸ್‌ ಸಲಹೆಗಾರ ಮಹಾಂತೇಶ ಹರಗಬಾಳ ಹೇಳಿದರು.

Advertisement

ನಗರದ ರಾಜಾಜಿನಗರ ಬಡಾವಣೆಯಲ್ಲಿ ನಾಡದೇವಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಆಚರಣೆಗಳು ಜೀವಂತ ಇರುವವರೆಗೂ ಕನ್ನಡ ಭಾಷೆಗೆ ಸಾವಿಲ್ಲ. ಕನ್ನಡ ಉಳಿಯಲು ಸಾಂಪ್ರದಾಯಿಕ ಆಚರಣೆಗಳು ಅವಶ್ಯ. ಹಾಗಾಗಿ ನಾವು ಜಾನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವುದರ ಮೂಲಕ ನಮ್ಮ ಮುಂದಿನ ಯುವ ಪೀಳಿಗೆಗೆ ಅವುಗಳನ್ನು ಬಳುವಳಿಯಾಗಿ ನೀಡಬೇಕಾಗಿದೆ. ಇಂದಿನ ಆಚರಣೆಗಳಿಗೆ ಸಾಮಾಜಿಕ ಜವಾಬ್ದಾರಿ ಕಡಿಮೆ. ಆದರೆ ಹಳೆಯ ಕಾಲದ ದೇಶಿ ಆಚರಣೆಗಳಿಗೆ ಸಮಾಜ ಕಟ್ಟುವ ಶಕ್ತಿಯಿದ್ದು ಅಂಥ ಕಲೆಗಳು ಉಳಿಯಬೇಕು ಎಂದರು.

ನ್ಯಾಯಾಂಗ ಇಲಾಖೆಯ ಅಧೀಕ್ಷಕ ಸಂಗಮೇಶ ಮನಹಳ್ಳಿ ಮಾತನಾಡಿ, ಇಂದಿನ ಆಧುನಿಕತೆ ಅಬ್ಬರದಲ್ಲಿ ನೈಜ ಕಲೆ, ಸಂಸ್ಕೃತಿ ನಶಿಸುತ್ತಿದೆ. ಅವುಗಳ ರಕ್ಷಣೆ, ಪ್ರೋತ್ಸಾಹಕ್ಕಾಗಿ ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.

ಉತ್ಸವ ಸಮಿತಿ ಅಧ್ಯಕ್ಷ ಸಿದ್ಧಲಿಂಗ ಮನಹಳ್ಳಿ, ಮುರುಗೇಶ ಸಂಗಮ, ಜೈ ಮಾತಾ ಯುವಕ ಸಂಘದ ಅಧ್ಯಕ್ಷ ಬಾಬು ಏಳಗಂಟಿ, ಶಿವಾನಂದ ಬಾಗೇವಾಡಿ, ಮುತ್ತು ದೇಶಪಾಂಡೆ, ಸಂಜು ಬಡಿಗೇರ, ವಿನಯ ಕುರ್ಲೆ, ಜ್ಯೋತಿ ಸಂಗಮ, ಜಯಶ್ರೀ ಪಾಟೀಲ, ಪವಿತ್ರಾ ಕಂಕಣವಾಡಿ, ಸರೋಜಿನಿ ಬಿರಾದಾರ, ಪವಿತ್ರಾ ಬಿರಾದಾರ, ಎಂ.ಎಸ್‌. ಕಳ್ಳಿಮನಿ, ಸಂತೋಷ ಬಾಗೇವಾಡಿ, ವೀರೇಶ ವಾಂಗಿ, ಸತೀಶ ಬಿರಾದಾರ, ಚಂದ್ರಶೇಖರ ಕುಲಕರ್ಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next