Advertisement

ಮಣ್ಣನ್ನು ರೈತರು ಸದ್ಬಳಕೆ ಮಾಡಿಕೊಳ್ಳಲಿ

06:27 AM Jun 14, 2020 | Team Udayavani |

ವಿಜಯಪುರ: ಅನಾನುಕೂಲ ಸರಿಪಡಿಸುವ ಮಾರ್ಗ ನಿಮ್ಮ ಕೈಯಲ್ಲಿದೆ. ರಸ್ತೆ ಸಮಸ್ಯೆ ನಿವಾರಣೆ, ರೈತರ ಜಮೀನಿಗೆ ಗೊಬ್ಬರ ವಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಪ್ರದೀಪ್‌ ಕುಮಾರ್‌ ತಿಳಿಸಿದರು.

Advertisement

ಪಟ್ಟಣದ 14ನೇ ವಾರ್ಡ್‌ನ  ರಾಜಕಾಲುವೆ ಸ್ವತ್ಛ ಮಾಡಲು ತೆಗೆಸಿದ ಕಸ ಮತ್ತು ಮಣ್ಣಿನ ರಾಶಿ ಪಕ್ಕದ ರಸ್ತೆಯ ಅರ್ಧ ಭಾಗವನ್ನೇ ಆವರಿಸಿದ್ದು, ಓಡಾಡಲು ಕಷ್ಟವಾಗುತ್ತಿದೆ. ಮಳೆ ಬಂದು ಮಣ್ಣು ರಸ್ತೆಗೆ ಕಚ್ಚಿಕೊಂಡು ರಸ್ತೆಗೆ ಹಾಕಿರುವ ಡಾಂಬರು ಕೀಳುತ್ತಿದೆ ಎಂದು  ಸಾರ್ವಜನಿಕರಿಂದ ದೂರು ಬಂದಿತ್ತು. ದೂರಿಗೆ ಪ್ರತಿಕ್ರಿಯಿಸಿ ಪುರಸಭೆ ಮುಖ್ಯಾಧಿಕಾರಿ ಪ್ರದೀಪ್‌ ಕುಮಾರ್‌, ಅದಕ್ಕೆ ಪರಿಹಾರೋಪಾಯ ಸೂಚಿಸಿದರು.

ಸುಮಾರು ತಿಂಗಳಿಂದ ರಾಜ ಕಾಲುವೆ ಸ್ವತ್ಛ ಮಾಡಿದ ಮಣ್ಣು ರಸ್ತೆ ಬದಿಯಲ್ಲೇ  ಇದ್ದು ಈಗ ಗಿಡ ಗಂಟಿಗಳು ಬೆಳೆದಿದೆ. ಈ ಮಣ್ಣನ್ನು ಬೇರೆ ಕಡೆಗೆ ಸಾಗಿಸುವ ಬದಲು ಈ ಮಾರ್ಗದಲ್ಲಿರುವ ರೈತರ ಜಮೀನಿಗೆ ಉತ್ತಮ ಗೊಬ್ಬರವಾ ಗುವುದರಲ್ಲಿ ಸಂಶಯವಿಲ್ಲ. ರೈತರು ಮಣ್ಣು ಸಾಗಿಸಲು ಟ್ರ್ಯಾಕ್ಟರ್‌ ವ್ಯವಸ್ಥೆ ಮಾಡಿಕೊಂಡರೆ ಪುರಸಭೆಯಿಂದ ಜೆಸಿಬಿ  ವ್ಯವಸ್ಥೆ ಮಾಡಿ ಮಣ್ಣು ತುಂಬಿಸಿ ಕೊಡುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next