Advertisement

ಸರ್ಕಾರ ರೈತರ ಸಾಲಮನ್ನಾ ಮಾಡಲಿ: ಕೋಳಿವಾಡ

03:50 AM Mar 04, 2017 | Team Udayavani |

ದಾವಣಗೆರೆ:ತೀವ್ರ ಬರಗಾಲದ ಹಿನ್ನೆಲೆ ರೈತರ ಸಾಲ ಮನ್ನಾ ಮಾಡುವ ಕುರಿತು ಕ್ರಮ ಕೈಗೊಳ್ಳಲು ವಿಧಾನ ಸಭಾ ಕಲಾಪದಲ್ಲೇ ಸರ್ಕಾರಕ್ಕೆ ಹೇಳಿರುವುದಾಗಿ ವಿಧಾನ ಸಭಾ ಸ್ಪೀಕರ್‌ ಕೆ.ಬಿ. ಕೋಳಿವಾಡ ತಿಳಿಸಿದ್ದಾರೆ.

Advertisement

ಶುಕ್ರವಾರ ರಾಣೆಬೆನ್ನೂರಿನ ಕುಂದುವಾಡ ಕೆರೆಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು,ರಾಜ್ಯದಲ್ಲಿರುವ ಒಟ್ಟಾರೆ ರೈತರ ಸಾಲ 52 ಸಾವಿರಕೋಟಿಯಲ್ಲಿ 10-12 ಕೋಟಿಯಷ್ಟು ಸಾಲ ಸಹಕಾರ ಕ್ಷೇತ್ರದಲ್ಲಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ. ಕೇಂದ್ರ ಒಪ್ಪಿದಲ್ಲಿ 50:50 ಸಾಲ ಮನ್ನಾಕ್ಕೆ ಸಿದಟಛಿ ಎಂಬುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಆದರೆ, ಸಾಲ ಮನ್ನಾ ವಿಚಾರವಾಗಿ ತಾವು ಅಧಿಕೃತ ಹೇಳಿಕೆ ನೀಡಲು ಒಪ್ಪುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next