Advertisement

ಕಾಂಗ್ರೆಸ್ ನವರು ಕೃಷ್ಣೆ-ಮೇಕೆದಾಟು ಕಡೆಗೆ ಹೊಗುವುದು ಬೇಡ, ಇಟಲಿಗೆ ಹೋಗಲಿ: ಯತ್ನಾಳ್

03:27 PM Mar 10, 2022 | Team Udayavani |

ಬೆಂಗಳೂರು: ಕಾಂಗ್ರೆಸ್ ನವರು ಕೃಷ್ಣೆಯ ಕಡೆ ನಡಿಗೆ ಹೋಗುವುದು ಬೇಡ, ಮೇಕೆದಾಟು, ವಿಧಾನಸೌಧಕ್ಕೂ‌ ಹೋಗುವುದು ಬೇಡ. ಅವರು ಇನ್ನು ಇಟಲಿ ಕಡೆ ನಡಿಗೆ ಹೋಗಲಿ ಎಂದು ಕಾಂಗ್ರೆಸ್ ನಾಯಕರ ಬಗ್ಗೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ನಮ್ಮ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಅವರು ಒಳಒಪ್ಪಂದ ಮಾಡಿಕೊಂಡಿಲ್ಲವೆಂದಾದರೆ ಬಾದಾಮಿ ಹೇಗೆ ಅಭಿವೃದ್ಧಿ ಆಗುತ್ತಿತ್ತು? ರಾಜ್ಯದಲ್ಲಿ ಶಿಕಾರಿಪುರ ಬಿಟ್ಟರೆ ಬಾದಾಮಿ ಕ್ಷೇತ್ರಕ್ಕೆ ಹೆಚ್ಚು ಹಣ ಹೋಗಿರೋದು ಎಂದರು.

ಇದನ್ನೂ ಓದಿ:ಗೋವಾ ಬಿಜೆಪಿಯಲ್ಲಿ ಬಂಡಾಯದ ಬಾವುಟ ಹಾರಿಸಿದ್ದ ಪರ್ರಿಕರ್ ಪುತ್ರನಿಗೆ ಅಲ್ಪ ಅಂತರದ ಸೋಲು!

ಕಚ್ಚಾ ಬಾದಾಮ್ ಗ್ಯಾಂಗ್: ಸದನದಲ್ಲಿ ಸಿದ್ದರಾಮಯ್ಯ ಗ್ಯಾಂಗ್ ಮಾತ್ರ ಇದೆ‌. ಆದರೆ ಕಚ್ಚಾ ಬಾದಾಮ್ ಗ್ಯಾಂಗ್ ಇರಲಿಲ್ಲ ಎಂದು ಯತ್ನಾಳ್ ಹೇಳಿದರು. ಕಚ್ಚಾ ಬಾದಾಮ್ ಗ್ಯಾಂಗ್ ಯಾರು ಎಂಬ ಪ್ರಶ್ನೆಗೆ ಅವರು ‘ಅದೇ ಮುಖ್ಯಮಂತ್ರಿ ಆಗಲೆಂದು ಪಾದಯಾತ್ರೆ ಮಾಡುತ್ತಿದ್ದಾರಲ್ಲ ಅವರೇ’ ಎಂದು ಹೆಸರು ಹೇಳದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಟಾಂಗ್ ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next