Advertisement

ಜನರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಲಿ

04:21 PM Jun 29, 2019 | Suhan S |

ಮಧುಗಿರಿ: ಸಾರ್ವಜನಿಕರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ಶಾಸಕ ಎಂ.ವಿ. ವೀರಭದ್ರಯ್ಯ ಹೇಳಿದರು.

Advertisement

ಐ.ಡಿ.ಹಳ್ಳಿ ಹೋಬಳಿಯ ದೊಡ್ಡದಾಳವಟ್ಟ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಆವರಣದಲ್ಲಿ ತಾಲೂಕು ಆಡಳಿತದಿಂದ ನಡೆದ ಹೋಬಳಿ ಮಟ್ಟದ ಪ್ರಥಮ ಜನಸ್ಪಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತ್ಯೇಕ ಕಡತ ಇಡಿ: ಅಧಿಕಾರಿಗಳು ಕೇವಲ ಅರ್ಜಿ ಪಡೆದರಷ್ಟೆ ಸಾಲದು. ಅವರ ಸಮಸ್ಯೆಗೆ ಮುಂದಿನ ಜನಸ್ಪಂದನೆ ಕಾರ್ಯಕ್ರಮದ ಹೊತ್ತಿಗೆ ಪರಿಹಾರ ಕೊಡಿಸಬೇಕು. ಅಧಿಕಾರಿಗಳು ಈ ಕಾರ್ಯಕ್ರಮದ ಅರ್ಜಿಗೆ ಪ್ರತ್ಯೇಕ ಕಡತ ಇಡಬೇಕು. ಇಂದಿನ ಕಾರ್ಯ ಕ್ರಮದಲ್ಲಿ ಹೆಚ್ಚಾಗಿ ಕಂದಾಯ ಇಲಾಖೆಯ ಸಮಸ್ಯೆಗಳು ಇದ್ದು, ಖಾತೆ ಬದಲಾವಣೆ, ಪೌತಿ ಖಾತೆ ಹಾಗೂ ಪಹಣಿ ತಿದ್ದುಪಡಿ ಮಾಡ ಬೇಕಿದ್ದು, ಹಲವಾರು ವರ್ಷದಿಂದ ಬಾಕಿಯಿದೆ. ಸಾಮಾನ್ಯ ವರ್ಗದ ಮನೆಗಳಿಗೆ ಬೇಡಿಕೆಯಿದ್ದು, ಹೆಚ್ಚುವರಿ 700 ಮನೆಗಳು ಹಾಗೂ ಅಂಬೇಡ್ಕರ್‌ ವಸತಿ ನಿಗಮದಿಂದ 1 ಸಾವಿರ ಮನೆ ತಂದಿದ್ದು, ವಸತಿ ರಹಿತರಿಗೆ ಹಂಚಿಕೆ ಮಾಡಲಾಗುವುದು ಎಂದರು.

ಅರ್ಜಿ ಸ್ವೀಕರಿಸಿದ ಶಾಸಕ: ಪಿಂಚಣಿ ಹಣವನ್ನು ಮುಖ್ಯಮಂತ್ರಿ ಕುಮಾರ ಸ್ವಾಮಿ ಹೆಚ್ಚಿಸಲು ಕ್ರಮ ಕೈಗೊಂಡಿದ್ದು, ಕಾರ್ಯ ಕರ್ತರು ಗ್ರಾಮಗಳಲ್ಲಿನ ಫ‌ಲಾನುಭವಿಗಳ ಪಟ್ಟಿ ಮಾಡಿ ಪಿಂಚಣಿ ಕೊಡಿಸಬೇಕು ಎಂದು ತಿಳಿಸಿದರು.

ಅಂಗವಿಕಲರು ಹಾಗೂ ವೃದ್ಧರ ಅರ್ಜಿಯನ್ನು ಶಾಸಕರೇ ಸ್ವೀಕರಿಸಿದರು. ಹಾಗೂ 80 ಅರ್ಜಿಗಳಲ್ಲಿ 60 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದರು. 30 ಪಿಂಚಣಿ ಆದೇಶ ವಿತರಿಸಿದ್ದು, 50 ಭಾಗ್ಯಲಕ್ಷ್ಮಿ ಬಾಂಡ್‌ ಹಾಗೂ ನೂರಾರು ಇತರೆ ಯೋಜನೆಯ ಆದೇಶಪತ್ರ ವಿತರಿಸಿದರು. ಉಪವಿಭಾಗಾಧಿಕಾರಿ ಚಂದ್ರ ಶೇಖರಯ್ಯ ಮಾತನಾಡಿ, ಪ್ರತಿ ಇಲಾಖೆಗಳ ಅರ್ಜಿಗೆ ಪ್ರತ್ಯೇಕ ಕೌಂಟರ್‌ ಇರಲಿದ್ದು, ನಿಮ್ಮ ಸಮಸ್ಯೆ ಸಾಧ್ಯವಾದಷ್ಟೂ ಸ್ಥಳದಲ್ಲೇ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ತಹಶೀಲ್ದಾರ್‌ ನಂದೀಶ್‌ ಮಾತನಾಡಿ, ಜನರ ಮನೆ ಬಾಗಿಲಿಗೆ ಸರ್ಕಾರ ಬರುವ ಕಾರ್ಯ ಕ್ರಮ ಇದಾಗಿದ್ದು, ಜು.5ರಂದು ಗರಣಿ ಗ್ರಾ.ಪಂ.ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಥಳದಲ್ಲೇ ಸಮಸ್ಯೆ ಬಗೆಹರಿ ಸುವ ಕಾರ್ಯ ಕ್ರಮವಾಗಿದೆ ಎಂದು ತಿಳಿಸಿದರು.

Advertisement

ಇಒ ನಂದಿನಿ, ಚಿಕ್ಕದಾಳವಟ್ಟ ಗ್ರಾಪಂ ಅಧ್ಯಕ್ಷೆ ಸುಜಾತ, ಜಿಪಂ ಮಾಜಿ ಸದಸ್ಯ ವೆಂಕಟರಂಗಾರೆಡ್ಡಿ, ಕಂದಾಯಾಧಿಕಾರಿ ನಾರಾಯಣಪ್ಪ, ಪಿಡಿಒ ಮಂಜುನಾಥ್‌, ನವೀನ್‌, ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು, ಜೆಡಿಎಸ್‌ ಕಾರ್ಯಕರ್ತರು, ಸಾರ್ವಜನಿಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next