Advertisement

ಮುಸ್ಲಿಮರ ವರ್ತನೆ ಬದಲಾಗಲಿ: ಈಶ್ವರಪ್ಪ

11:07 PM Apr 18, 2022 | Team Udayavani |

ಶಿವಮೊಗ್ಗ: ಜಗದ್ಗುರುಗಳು ನಮ್ಮ ಮನೆಗೆ ಯಾವಾಗಲೂ ದೇವರ ರೂಪದಲ್ಲಿ ಬರುತ್ತಿರುತ್ತಾರೆ. ಪೇಜಾವರ ಮಠದ ಹಿರಿಯ ಶ್ರೀಗಳೂ ನಮ್ಮ ಮನೆಗೆ ಭೇಟಿ ನೀಡುತ್ತಿದ್ದರು. ಈಗ ವಿಶ್ವಪ್ರಸನ್ನ ತೀರ್ಥರು ನನ್ನ ಮೇಲೆ ಬಂದಿರುವ ಆರೋಪದಿಂದ ಮುಕ್ತವಾಗಿ ಹೊರ ಬರುವಂತೆ ಆಶೀರ್ವಾದ ಮಾಡಿದ್ದಾರೆ. ಇದು ಅದಷ್ಟು ಬೇಗ ಫಲ ಕೊಡುತ್ತದೆ ಎಂಬ ವಿಶ್ವಾಸ ಇದೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ಪೇಜಾವರ ಶ್ರೀಗಳ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳ ಉತ್ಸವ ಸಂದರ್ಭದಲ್ಲಿ ಸಮಾಜ ದ್ರೋಹಿಗಳು ಆಘಾತಕಾರಿ ಕೃತ್ಯ ನಡೆಸುತ್ತಿದ್ದಾರೆ. ಇದನ್ನೆಲ್ಲ ನೋಡಿದಾಗ ಎಷ್ಟೊಂದು ಸಹಿಸಿಕೊಳ್ಳಬೇಕು ಎಂದು ಪೇಜಾವರ ಶ್ರೀಗಳು ನೊಂದು ಹೇಳಿದ್ದಾರೆ.

ಇದನ್ನೂ ಓದಿ:ಜಹಾಂಗೀರ್ ಪುರಿ ಹಿಂಸಾಚಾರ : ದೆಹಲಿ ಪೊಲೀಸರಿಗೆ ಓವೈಸಿ ಗಂಭೀರ ಪ್ರಶ್ನೆ

ಇದು ಎಲ್ಲರಿಗೂ ತುಂಬಾ ಆಘಾತ ತರುವ ವಿಷಯ. ಮುಸಲ್ಮಾನ ಬಂಧುಗಳು ಹಿಂಸಾಚಾರದ ವರ್ತನೆಯನ್ನು ತಿದ್ದಿಕೊಳ್ಳಬೇಕು. ಅವರ ವರ್ತನೆ ಬದಲಾಗಲಿದೆ ಎಂಬ ನಂಬಿಕೆ ಇದೆ. ಆದಷ್ಟು ಬೇಗ ಹಿಂದೂಸ್ಥಾನದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವ ಪ್ರಯತ್ನ ನಡೆಸಲಿ. ಈಗ ತೆಗೆದುಕೊಳ್ಳುತ್ತಿರುವ ಕ್ರಮ ಸಾಲುತ್ತಿಲ್ಲ ಎಂದು ಸ್ವಾಮೀಜಿಗಳು ಸಹ ಹೇಳಿದ್ದಾರೆ. ನಾನು ಸಹ ಈ ಬಗ್ಗೆ ಸಿಎಂ ಹಾಗೂ ಗೃಹ ಸಚಿವರ ಗಮನಕ್ಕೆ ತರುವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next