Advertisement

ರಾಹುಲ್‌ ಮೇಜರ್‌ ಸರ್ಜರಿ ನಡೆಸಲಿ 

08:27 AM Dec 22, 2017 | |

ಹೈದರಾಬಾದ್‌: ಗುಜರಾತ್‌ ಚುನಾವಣೆ ಫ‌ಲಿತಾಂಶ ಕಾಂಗ್ರೆಸನ್ನು ಪುನಾರಚಿಸುವ ಅಗತ್ಯ ತಂದಿದೆ. ಜತೆಗೆ ಪಕ್ಷದಲ್ಲಿ ಮೇಜರ್‌ ಸರ್ಜರಿ ನಡೆಸಬೇಕಾದ ಅಗತ್ಯವಿದೆ ಎಂದು ಪಕ್ಷದ ಹಿರಿಯ ನಾಯಕ ಎಂ.ವೀರಪ್ಪ ಮೊಲಿ ಹೇಳಿದ್ದಾರೆ. ಅದನ್ನು ಪಕ್ಷದ ಅಧ್ಯಕ್ಷ ರಾಗಿ ರಾಹುಲ್‌ ಗಾಂಧಿ ಮಾಡಬೇಕಿದೆ ಎಂದಿದ್ದಾರೆ.  ಹೈದರಾಬಾದ್‌ನಲ್ಲಿ ಮಾತನಾ ಡಿದ ಅವರು, ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರನ್ನೂ ಬದಲಾಯಿಸ ಬೇಕು ಎಂ ದು ಅವರು ಪ್ರತಿಪಾದಿಸಿದ್ದಾರೆ. ಗುಜರಾತ್‌ ಚುನಾವಣೆಯಲ್ಲಿ ಪಕ್ಷ ತನ್ನ ಸ್ಥಾನಗಳನ್ನು ವೃದ್ಧಿಸಿಕೊಂಡಿದೆ. ಹೀಗಾಗಿ ಮುಂದಿನ ಯಾವುದೇ ಚುನಾವಣೆಯಲ್ಲಿ ಪಕ್ಷವೇ ಹೆಚ್ಚಿನ ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದು ವೀರಪ್ಪ  ಮೊಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next