Advertisement

ಪಿಯು ವಿದ್ಯಾರ್ಥಿಗಳು ವೆಬ್‌ಸೈಟ್‌ ಸದ್ಬಳಕೆ ಮಾಡಿಕೊಳ್ಳಲಿ

05:16 PM Apr 30, 2020 | Suhan S |

ಬೈಲಹೊಂಗಲ: ಪಿಯುಸಿ ವಿದ್ಯಾರ್ಥಿ ವೃಂದದ ಅನುಕೂಲಕ್ಕೆ ಆರಂಭಿಸಿದ ಉಚಿತ ವೆಬ್‌ಸೈಟ್‌ನ್ನು ಸ್ಥಳೀಯ ಮೂರು ಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಬುಧವಾರ ಉದ್ಘಾಟಿಸಿದರು.

Advertisement

ಸಾಫ್ಟವೇರ್‌ ಇಂಜನೀಯರ್‌ ವಿಶಾಲ ಕುಂಬಾರ ಅಭಿವೃದ್ಧಿಪಡಿಸಿರುವ ಈ ವೆಬ್‌ಸೈಟ್‌ನಲ್ಲಿ ಸಿಇಟಿ ಮತ್ತು ನೀಟ್‌ಗೆ ಬೇಕಾದ ಎಲ್ಲ ಪ್ರಶ್ನೆಪತ್ರಿಕೆ ಮತ್ತು ಉತ್ತರ ದೊರೆಯಲಿದೆ. ವಿದ್ಯಾರ್ಥಿಗಳು ಈ ವೆಬ್‌ಸೈಟ್‌ನ ಸದುಪಯೋಗಪಡಿಸಿಕೊಳ್ಳಬೇಕೆಂದು ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು. ವಿದ್ಯಾರ್ಥಿಗಳು www.allindiamocktests.com ವೆಬ್‌ಸೆ„ಟ್‌ ಮೂಲಕ ಮೇ 3ರಿಂದ ವಾರಕ್ಕೊಮ್ಮೆ ಪೂರ್ವ ತಯಾರಿ ಪರೀಕ್ಷೆ ಬರೆಯಬಹುದಾಗಿದೆ. ಇದರಿಂದ ಅವರ ಕೌಶಲ್ಯ ಹೆಚ್ಚಲಿದ್ದು, ನೀಟ್‌ಗೆ ಸಿದ್ಧಗೊಳ್ಳಲು ಅನುಕೂಲವಾಗಲಿದೆ. ಕಂಪ್ಯೂಟರ್‌, ಆ್ಯಂಡ್ರಾಯಿಡ್‌ ಮೊಬೈಲ್‌ನಲ್ಲಿ ಸೈಟ್‌ ವೀಕ್ಷಿಸಬಹುದು ಎಂದು ವೆಬ್‌ಸೈಟ್‌ ಅಭಿವೃದ್ಧಿಪಡಿಸಿರುವ ವಿಶಾಲ ಕುಂಬಾರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next