Advertisement
ತಂದಿ ಇಲ್ಲದ ಮಗನ್ ಸಾಲಿ ಕಲಿಸಿ ಬೆಳೆಸಿದ್ವಿ. ಪೊಲೀಸ್ ಆಗಿ ಕೆಲ್ಸ ಮಾಡ್ತಿದ್ದ. ಎರಡ್ ದಿನದ ಹಿಂದ್ ಊರಿಗಿ ಬಂದಿದ್ದ. ನಮಗ್ ಸರಿಯಾಗಿ ಮಾತಾಡ್ಸಿ ವಾಪಾಸ್ಸ ಬಂದಿದ್ದ. ಅಂವಾ ನೌಕರಿ ಸೇರಿದ್ದ ಮ್ಯಾಗ್ ಸಣ್ಣದೊಂದು ಮನಿನೂ ಕಟ್ಟಿದ್ವಿ. ಮದುವಿ ಮಾಡ್ಕೊಂಡು ಸುಃಖವಾಗಿ ಇರಬೇಕಾದ ಮಗ ಸತ್ತಾನ್. ಊರಿಗಿ ಬಂದಾಗ, ಕೆಲ್ಸ ಬಾಳ್ ಕೊಡ್ತಾರ್ ಅಂತಿದ್ದ. ಅಂವಾ ಗುಂಡ್ ಹಾರಿಸ್ಕೊಂಡು ಸಾಯೂ ಮಗಾ ಅಲ್ಲ. ಎಲ್ಲಿ ಏನ್ ಆಗೈತೋ ಎಂದು ಹನಮವ್ವ ಗೋಳಾಡುತ್ತಿದ್ದಳು.
Related Articles
Advertisement
ರಾತ್ರಿ ಎಸ್ಪಿ ಪ್ರೀತಿಯಿಂದ ಮಾತನಾಡಿಸಿದ್ದರು: ಎರಡು ದಿನ ನಡೆದ ಪೊಲೀಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳೆಲ್ಲ ಶನಿವಾರ ರಾತ್ರಿ ಖಾಸಗಿಯಾಗಿ ಔತಣಕೂಟ ಇಟ್ಟುಕೊಂಡಿದ್ದರು. ಆ ವೇಳೆ ಅಲ್ಲಿಗೆ ಬಂದಿದ್ದ ಪೇದೆ ಮಂಜುನಾಥನನ್ನು ಎಸ್ಪಿ ರಿಷ್ಯಂತ ಕೂಡ ಆತ್ಮೀಯವಾಗಿ ಮಾತನಾಡಿಸಿ, ನೀನು ಇನ್ನೂ ಎಂಗ್ ಇದ್ದೀಯಾ, ಯಾವುದಾದರೂ ಕ್ರೀಡೆಯಲ್ಲಿ ಭಾಗವಹಿಸಬೇಕಿತ್ತಲ್ವಾ ಎಂದು ಕೇಳಿದ್ದರಂತೆ. ರಾತ್ರಿ ಔತಣಕೂಟ ಮುಗಿಸಿಕೊಂಡು ಎಸ್ಪಿ ಸಹಿತ ಎಲ್ಲ ಅಧಿಕಾರಿಗಳು ಮನೆಗೆ ಹೋಗಿ ಮಲಗಿದ್ದರು. ಬೆಳಗ್ಗೆಯ ಹೊತ್ತಿಗೆ ತಮ್ಮದೇ ಇಲಾಖೆಯ ಪೇದೆಯೊಬ್ಬ ಆತ್ಮಹತ್ಯೆಗೆ ಶರಣಾಗಿರುವುದು ಇತರೆ ಸಿಬ್ಬಂದಿಗೂ ಬರಸಿಡಿಲು ಬಡಿದಂತಾಗಿದೆ.
ಒಟ್ಟಾರೆ, ಯುವ ಪೊಲೀಸ್ ಪೇದೆಯೊಬ್ಬನ ಸಾವು, ಇಡೀ ಕುಟುಂಬದ ಜತೆಗೆ ಇಲಾಖೆಯನ್ನೂ ಖಾಸಗಿಗೊಳಿಸಿದೆ. ತನಿಖೆ ಮುಗಿದು, ಕುಟುಂಬದ ಆರೋಪದಕ್ಕೆ ಸತ್ಯಾಸತ್ಯತೆ ತಿಳಿಸಬಹುದು. ಆದರೆ, ಇಡೀ ಸಮಾಜದ ಜನರಿಗೆ ಧೈರ್ಯ ಹೇಳುವ ಸ್ಥಾನದಲ್ಲಿರುವ ಪೊಲೀಸ್ ಇಲಾಖೆಯ ವ್ಯಕ್ತಿಯೇ ಈ ರೀತಿ ಸಾವಿಗೀಡಾಗಿರುವುದು ದುರಂತ ಎಂಬ ಮಾತು ಕೇಳಿ ಬರುತ್ತಿವೆ.
ಎಸ್ಪಿಗೆ ಡಿ.1 ಆಗಿ ಬರಲ್ವಾಸಿ.ಬಿ. ರಿಷ್ಯಂತ ಅವರು ಎಸ್ಪಿ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಒಂದಿಲ್ಲೊಂದು ಒತ್ತಡದಲ್ಲೇ ಕೆಲಸ ನಿರ್ವಹಿಸುವಂತಾಗಿದೆ. ಕಳೆದ ವರ್ಷ ಇದೇ ಡಿ.1ರಂದು, ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು, ನವನಗರ ಹೆಲಿಪ್ಯಾಡ್ನಲ್ಲಿ ಎಚ್ಚರಿಕೆ ನೀಡಿದ್ದರು. ಯಾರಿ ಇಲ್ಲಿನ ಎಸ್ಪಿ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಈಗ ಅದೇಡಿ.1ರಂದು ತಮ್ಮದೇ ನಿವಾಸದ ಎದುರು, ತಮ್ಮದೇ ಮನೆಯ ಭದ್ರತೆಗೆ ನಿಯೋಜನೆಗೊಂಡ ಪೇದೆ ಆತ್ಮಹತ್ಯೆ
ಮಾಡಿಕೊಂಡಿದ್ದಾನೆ. ಹೀಗಾಗಿ ಎಸ್ಪಿ ರಿಷ್ಯಂತ ಅವರಿಗೆ ಡಿ.1ರಂದು ಒಂದಿಲ್ಲೊಂದು ಕಿರಿಕಿರಿ ಬರುತ್ತಲೇ ಇರುತ್ತಿವೆ ಎಂದು ಪೊಲೀಸರೇ ಮಾತನಾಡಿಕೊಳ್ಳುತ್ತಿದ್ದರು.