Advertisement

CM ಸ್ಥಾನ ಬಗ್ಗೆ ಕೇಜ್ರಿಯೇ ನಿರ್ಧರಿಸಲಿ: ಹೈಕೋರ್ಟ್‌

01:33 AM Apr 05, 2024 | Team Udayavani |

ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿತರಾಗಿರುವ ಅರವಿಂದ್‌ ಕೇಜ್ರಿವಾಲ್‌ ಅವರು ಸಿಎಂ ಆಗಿ ಮುಂದುವರಿಯಬೇಕೇ ಅಥವಾ ಬೇಡವೆ ಎಂಬುದನ್ನು ಅವರೇ ನಿರ್ಧಿಸಬೇಕು. ಇಲ್ಲವೇ ರಾಷ್ಟ್ರಪತಿ ಅಥವಾ ಲೆಫ್ಟಿನೆಂಟ್‌ ಗವರ್ನರ್‌ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ದಿಲ್ಲಿ ಹೈಕೋರ್ಟ್‌ ಹೇಳಿದೆ.
ಸಿಎಂ ಹುದ್ದೆಯಿಂದ ಕೇಜ್ರಿವಾಲ್‌ರನ್ನು ಕಿತ್ತು ಹಾಕುವಂತೆ ನಿರ್ದೇಶನ ಕೋರಿ ಸಲ್ಲಿಕೆಯಾಗಿದ್ದ 2ನೇ ಪಿಐಎಲ್‌ ಕುರಿತು ದಿಲ್ಲಿ ಹೈಕೋರ್ಟ್‌ನ ಹಂಗಾಮಿ ನ್ಯಾ| ಮನಮೋಹನ್‌ ಮತ್ತು ನ್ಯಾ| ಮನ್‌ಮಿತ್‌ ಪ್ರೀತಮ್‌ ಸಿಂಗ್‌ ಅರೋರಾ ಅವರಿದ್ದ ಪೀಠವು, ರಾಷ್ಟ್ರದ ಹಿತಾಸಕ್ತಿ ಬಂದಾಗ ವೈಯಕ್ತಿಕ ಹಿತಾಸಕ್ತಿಗಳು ಗೌಣವಾಗಬೇಕು ಎಂದು ಮಾರ್ಮಿಕವಾಗಿ ಹೇಳಿತು.

Advertisement

ಕೇಜ್ರಿವಾಲ್‌ ಫೋಟೋ!
ಕೇಜ್ರಿವಾಲ್‌ ಆಪ್‌ ಶಾಸಕರಿಗೆ ಬರೆದ ಸಂದೇಶವನ್ನು ಅವರ ಪತ್ನಿ ಸುನೀತಾ ಓದಿದ್ದಾರೆ. ಈ ವೇಳೆ, ಗೋಡೆ ಮೇಲೆ ಒಂದು ಬದಿಯಲ್ಲಿ ಭಗತ್‌ ಸಿಂಗ್‌ ಮತ್ತು ಮತ್ತೂಂದು ಬದಿಯಲ್ಲಿ ಅಂಬೇಡ್ಕರ್‌ ಹಾಗೂ ಮಧ್ಯೆ ಜೈಲಲ್ಲಿರುವ ಕೇಜ್ರಿವಾಲ್‌ ಫೋಟೋ ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next