Advertisement

ಧರ್ಮ ಕಾರ್ಯಕ್ಕೆ ಸರ್ವರೂ ಕೈಗೂಡಿಸಲಿ

07:07 AM Jan 14, 2019 | Team Udayavani |

ಕಲಬುರಗಿ: ಧರ್ಮದಿಂದಲೇ ಶಾಂತಿ ಎನ್ನುವುದನ್ನು ಮನಗಂಡು ಸರ್ವರೂ ಧರ್ಮ ಕಾರ್ಯಗಳಿಗೆ ಕೈಗೂಡಿಸಿದರೆ ಸಮಾಜದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಚಿನ್ಮಯಗಿರಿ ಮಹಾಂತೇಶ್ವರ ಮಠದ ಪೂಜ್ಯರಾದ ಸಿದ್ಧರಾಮ ಶಿವಾಚಾರ್ಯರು ನುಡಿದರು.

Advertisement

ತಾಲೂಕಿನ ಕಡಣಿ ಗ್ರಾಮದ ಹಿರೇಮಠ ಪುನರ್‌ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಐತಿಹಾಸಿಕ ಶ್ರೀಮಠ ಪುನರುಜ್ಜೀವನಗೊಳಿಸಲು ಭಕ್ತರು ತನು-ಮನ-ಧನದಿಂದ ನೆರವು ನೀಡಬೇಕು ಎಂದು ವಿನಂತಿಸಿಕೊಂಡರು.

ಧರ್ಮ ಕಾರ್ಯಗಳು ಒಬ್ಬರಿಂದಲೇ ನಡೆಯುವುದಿಲ್ಲ. ಕಷ್ಟ ಪಟ್ಟು ನಿಷ್ಠೆಯಿಂದ ದುಡಿದರೆ, ಸುಲಭವಾಗಿ ನೆರವೇರುತ್ತವೆ ಎಂದರು.

ಶ್ರೀಮಠದ ಗದಗಯ್ಯ ಹಿರೇಮಠ, ಶಂಭುಲಿಂಗಯ್ಯ ಹಿರೇಮಠ, ಗಣ್ಯರಾದ ಗುಂಡೇರಾಯ ಎಂ. ಕರಿಕಲ್‌, ಶರಣಗೌಡ ಕೆ. ಮಾಲಿ ಪಾಟೀಲ, ಮಲ್ಲೇಶಪ್ಪ ಇಸರಿ, ಲಿಂಗರಾಜ ಆಲಗೂಡ, ಶಂಕರಗೌಡ ಪಾಟೀಲ, ಹಣಮಂತರಾಯ ಲೋಕಾಣಿ, ಶಿವಯೋಗೆಪ್ಪ ಗಿರೆಪ್ಪಗೋಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next