Advertisement

ವಡೋದರ: ಅಪರಿಚಿತ ವಾಹನ ಹರಿದು ಚಿರತೆ ಸಾವು

04:43 PM Dec 23, 2017 | Team Udayavani |

ವಡೋದರ : ಇಲ್ಲಿಂದ 90 ಕಿ.ಮೀ. ದೂರದ ಜಗದಿಯಾ ಎಂಬಲ್ಲಿನ ಗೋವಳಿ ಗ್ರಾಮದಲ್ಲಿ ಅಪರಿಚಿತ ವಾಹನವೊಂದು ಹರಿದು ಚಿರತೆಯೊಂದು ಮೃತಪಟ್ಟಿತೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Advertisement

ರಾಜೇಂದ್ರಸಿಂಗ್‌ ಅನೂಪ್‌ ಸಿನ್ಸಾ ಮತ್ತು ದೋಲತ್‌ ಸಿನ್ಹ ಎಂಬ ಸ್ಥಳೀಯ ನಿವಾಸಿಗಳು ಹೊಲವೊಂದರಲ್ಲಿ  ಚಿರತೆಯ ಮೃತ ದೇಹವನ್ನು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. 

ಚಿರತೆಯು ಸುಮಾರು 3 ವರ್ಷ ಪ್ರಾಯದ್ದಿದ್ದು ಆಹಾರವನ್ನು ಅರಸಿಕೊಂಡು ಇಲ್ಲಿಗೆ ಬಂದಿರಬಹುದು ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ. 

ಜಗದಿಯಾ, ನೇತ್ರಂಗ್‌ ಮತ್ತು ದೇದಿಯಾಪಾಡ ತೆಹಶೀಲ್‌ಗೆ ತಾಗಿಕೊಂಡಿರುವ ಹೆದ್ದಾರಿಯಲ್ಲಿ ಚಿರತೆಗಳ ಆಗೀಗ ಎಂಬಂತೆ ಸಾಯುವುದು ಕಳವಕಳಕಾರಿ ಸಂಗತಿಯಾಗಿದೆ ಎಂದವರು ವಿಷಾದಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next