Advertisement

ಬೆಂಗಳೂರು ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ಗೆ ನುಗ್ಗಿದ ಚಿರತೆ ಸೆರೆ

05:18 PM Feb 28, 2018 | Sharanya Alva |

ಬೆಂಗಳೂರು:ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ನೊಳಗೆ ಹಾಡಹಗಲೇ ಚಿರತೆ ನುಗ್ಗಿರುವ ಘಟನೆ ಬುಧವಾರ ರಾಮನಗರ ತಾಲೂಕಿನ ಮಂಚನಾಯಕನಹಳ್ಳಿಯಲ್ಲಿ ನಡೆದಿತ್ತು. ಪಾರ್ಕ್ ನಲ್ಲಿದ್ದ ನೂರಾರು ಮಕ್ಕಳು, ಜನರು ಭಯಭೀತಗೊಂಡಿದ್ದರು. ಕೊನೆಗೂ ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

Advertisement

ಅಮ್ಯೂಸ್ ಮೆಂಟ್ ಪಾರ್ಕ್ ನೊಳಗೆ ಚಿರತೆ ನುಗ್ಗಿದ್ದು, ಅರಣ್ಯಾಧಿಕಾರಿಗಳು ಮತ್ತು ಪೊಲೀಸರು ಚಿರತೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದಾರೆ.

ಚಿರತೆ ಅಮ್ಯೂಸ್ ಮೆಂಟ್ ಪಾರ್ಕ್ ನ ಯಾವ ಭಾಗದಲ್ಲಿ ಅಡಗಿಕೊಂಡಿದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಜನರನ್ನು ಹೊರಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವರದಿ ಹೇಳಿದೆ.

ಚಿರತೆ ಸೆರೆ:ಬನ್ನೇರುಘಟ್ಟ ವೈದ್ಯರಿಂದ ಅರಿವಳಿಕೆ ಮದ್ದು ನೀಡಿ ವಂಡರ್ ಲಾ ಅಮ್ಯೂಸ್ ಮೆಂಟ್ ಪಾರ್ಕ್ ಗೆ ನುಗ್ಗಿದ್ದ ಚಿರತೆಯನ್ನು ಸೆರೆಹಿಡಿಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next