Advertisement

ಚಿಕ್ಕಬಳ್ಳಾಪುರ: ಒಂದು ತಿಂಗಳಿನಿಂದ ತೇಕಲಾಹಳ್ಳಿ ಗ್ರಾಮದ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ

02:13 PM Sep 11, 2022 | Team Udayavani |

ಚಿಕ್ಕಬಳ್ಳಾಪುರ : ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ತೇಕಲಾಹಳ್ಳಿ ಗ್ರಾಮದಲ್ಲಿ ರೈತರು ಮತ್ತು ಜನಸಾಮಾನ್ಯರ ನೆಮ್ಮದಿಯನ್ನು ಕೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯ ಬೋನಿನಲ್ಲಿ ಸರಿಯಾಗಿದೆ.

Advertisement

ಮಂಚನಹಳ್ಳಿ ತಾಲೂಕು ಹಾಗೂ ಮತಿತರ ಪ್ರದೇಶದಲ್ಲಿ ಚಿರತೆಯ ಹಾವಳಿಯಿಂದ ಜನ ಆತಂಕಗೊಂಡಿದ್ದರು ಈ ಸಂಬಂಧ ಕಳೆದ ಒಂದು ತಿಂಗಳ ಹಿಂದೆಯೇ ತೇಕಲಹಳ್ಳಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಕೂಡಲೆ ಕಾರ್ಯ ಪರ್ವತರಾದ ಅರಣ್ಯ ಇಲಾಖೆ ಅಧಿಕಾರಿ ಚೇತನ್ ಮತ್ತು ಅವರ ತಂಡ ರಾತ್ರಿ ಗಸ್ತು ಮಾಡಿದರಲ್ಲದೆ ಕಳೆದ ಒಂದು ತಿಂಗಳಿನಿಂದ ವಿವಿಧಡೆ ಬೋನಿಟ್ಟು ಚಿಂತೆಯನ್ನು ಸೆರೆಹಿಡಿಯುವ ಕೆಲಸವನ್ನು ಮಾಡಿದ್ದರು.

ಕೊನೆಗೂ ಸುಮಾರು ಎರಡು ವರ್ಷದ ಗಂಡು ಚಿರತೆ ಮರಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದ್ದು ಇದರಿಂದ ಗ್ರಾಮಸ್ಥರು ನಿಟ್ಟ ಉಸಿರು ಬಿಟ್ಟಂತಾಗಿದೆ.

ಇದನ್ನೂ ಓದಿ : ಆಸೆ ಈಡೇರಿತು: 21 ವರ್ಷಗಳ ನಂತರ ಶೇವಿಂಗ್ ಮಾಡಿದ ಛತ್ತೀಸ್‌ಗಢದ ವ್ಯಕ್ತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next