Advertisement

ಚಿರತೆ ದಾಳಿಗೆ ರೈತರು ಕಂಗಾಲು : ಚಿರತೆ ಉಪಟಳ ತಡೆಗೆ ತಹಶೀಲ್ದಾರ್‌ ಆದೇಶ

01:10 PM Mar 30, 2022 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಹೋಬಳಿ ವ್ಯಾಪ್ತಿಯ ಹಿರೇಮುದ್ದೇನಹಳ್ಳಿ- ಕಲ್ಲುಕೋಟೆ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಗ್ರಾಮಗಳಲ್ಲಿ ಚಿರತೆ ಹಾವಳಿ ಮಿತಿ ಮೀರಿದ್ದು, ಗ್ರಾಮಸ್ಥರನ್ನು ಕಂಗಾಲಾಗಿಸಿದೆ.

Advertisement

ತಾಲೂಕಿನ ಹಿರೇಮುದ್ದೇನಹಳ್ಳಿ-ಕಲ್ಲುಕೋಟೆ ಅರಣ್ಯಪ್ರದೇಶದ ಅಂಚಿನಲ್ಲಿರುವ ಗ್ರಾಮಗಳಲ್ಲಿ ಚಿರತೆ ಹಾವಳಿ ಮಿತಿಮೀರಿದ್ದು, ಚಿರತೆ ಹಾವಳಿಯಿಂದ ಕಂಗೆಟ್ಟ ಗ್ರಾಮಸ್ಥರು ಪದೇ ಪದೇ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈ ಕುರಿತು ಇತ್ತೀಚಿಗೆ ನಡೆದ ಗ್ರಾಮ ಸಭೆಯಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಇದುವರೆಗೂ ಚಿರತೆ ದಾಳಿಯಿಂದ 10 ಹೆಚ್ಚು ಜಾನುವಾರುಗಳನ್ನು ಬಲಿಯಾಗಿದ್ದು, ರೈತರು ಜಮೀನುಗಳಲ್ಲಿ ಕೆಲಸ ಮಾಡಲು ಆತಂಕದ ವಾತಾವರಣ ಉಂಟಾಗಿದೆ.
ಸೋಮವಾರ ಹಿರೇಮುದ್ದೇನಹಳ್ಳಿ ಗ್ರಾಮದ ಚಿಕ್ಕ ನರಸಿಂಹಯ್ಯನವರಿಗೆ ಸೇರಿದ ಕುರಿ ಹಿಂಡಿನ ಮೇಲೆ ಚಿರತೆ ದಾಳಿ ಮಾಡಿ. ಸುಮಾರು 6 ಸಾವಿರಕ್ಕು ಹೆಚ್ಚು ಮೌಲ್ಯದ ಕುರಿಯನ್ನು ಬಲಿ ಪಡೆದಿದೆ.

ಚಿರತೆ ಹಾವಳಿ ತಡೆಗಟ್ಟಲು ಪದೇ ಪದೇ ಮನವಿ ಮಾಡಿದರು ಸ್ಪಂದಿಸದ ದೊಡ್ಡಬಳ್ಳಾಪುರ ತಾಲೂಕು ಆಡಳಿತದ ವಿರುದ್ಧ ಗ್ರಾಮಸ್ಥರ ಆಕೊ›àಶ ತೀವ್ರವಾಗಿದ್ದು, ನಗರದ ತಾಲೂಕು ಕಚೇರಿ ಮುಂದೆ ಚಿರತೆ ದಾಳಿಯಿಂದ ಸತ್ತ ಕುರಿಯನ್ನ ತಂದು ಪ್ರತಿಭಟನೆ ನಡೆಸಲು ರೈತರು ಮುಂದಾಗಿದ್ದರು.

ಈ ಹಿನ್ನಲೆಯಲ್ಲಿ ಮಂಗಳವಾರ ಬೆಳಗ್ಗೆ ತಹಶೀಲ್ದಾರ್‌ ಮೋಹನಕುಮಾರಿ ಹಿರೇಮುದ್ದೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು.ಜಿÇÉಾಪಂಚಾಯಿತಿ ಮಾಜಿ ಸದಸ್ಯ ಹೆಚ್‌ ಅಪ್ಪಯ್ಯಣ್ಣ. ವಲಯ ಅರಣ್ಯಾಧಿಕಾರಿ ಮುನಿರಾಜು ಅವರೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಅಲ್ಲದೆ ಚಿರತೆಯನ್ನು ಸೆರೆಹಿಡಿಯಲು ಹೆಚ್ಚುವರಿ ಬೋನ್‌ ಅಳವಡಿಸಿ, ತ್ವರಿತವಾಗಿ ಕ್ರಮಕೈಗೊಂಡು ಚಿರತೆ ಉಪಟಳ ತಡೆಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಈ ವೇಳೆ ರೈತರು ಚಿರತೆ ಹಾವಳಿ ಕುರಿತು ತಹಶೀಲ್ದಾರ್‌ ಅವರಿಗೆ ತಮ್ಮ ಅಳಲನ್ನು ತೋಡಿಕೊಂಡರು.

ನಾವು ಈ ವಿಷಯವನ್ನು ಅರಣ್ಯಾಧಿಕಾರಿಗಳ ತಿಳಿಸಿ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಹೆಸರಿಗೆ ಮಾತ್ರ ಚಿರತೆ ಹಿಡಿಯಲು ಬೋನ್‌ ಇಟ್ಟಿದ್ದೇವೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಆದ್ದರಿಂದ ನಾವುಗಳು ನಾವು ಮನನೊಂದು ಪ್ರತಿಭಟನೆ ಮಾಡಲು ಸಿದ್ಧರಾಗಿದ್ದೆವು ಎಂದರು.

ಈ ವೇಳೆ ಮಾತನಾಡಿದ ತಹಶೀಲ್ದಾರ್‌ ಮೋಹನಕುಮಾರಿ, ಈ ವ್ಯಾಪ್ತಿಯ ರೈತರ ಸಮಸ್ಯೆಯ ಮನವರಿಕೆಯಾಗಿದೆ. ಚಿರತೆಯ ಉಪಟಳ ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೆ ಚಿರತೆ ದಾಳಿಯಿಂದ ನಷ್ಟಕ್ಕೆ ಒಳಗಾದ ರೈತನಿಗೆ ಎರಡು ಮೂರು ದಿನಗಳಲ್ಲಿ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು.

ಈ ವೇಳೆ ರೈತ ಸಂಘದ ಮುಖಂಡರಾದ ವಾಸು, ತೂಬಗೆರೆ ಯುವ ಮುಖಂಡರಾದ ಉದಯ ಆರಾಧ್ಯ, ಸ್ಥಳೀಯ ತೂಬಗೆರೆ ಪಶುವೈದ್ಯಾಧಿಕಾರಿ ರಂಗಪ್ಪ, ಸ್ಥಳೀಯ ಮುಖಂಡರಾದ ಅಂಬರೀಶ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next