Advertisement

ನಂಜಗೂಡು ಆಹಾರ ಅರಸಿ ಬಂದು ಬೋನು ಸೇರಿದ ಚಿರತೆ 

04:42 PM Oct 23, 2021 | Team Udayavani |

ನಂಜಗೂಡು: ಆಹಾರಕ್ಕಾಗಿ ಅಲೆದಾಡುತ್ತ ಬಂದ ಚಿರತೆಯೊಂದು ನಂಜನಗೂಡು ತಾಲ್ಲೂಕಿನ ಮಡುವಿನಹಳ್ಳಿ ಸಮೀಪ ಚಿಲಕ್ಕಹಳ್ಳಿ ಗ್ರಾಮದ ಗುರುಸ್ವಾಮಪ್ಪ ಅವರ ಜಮೀನಲ್ಲಿರಿಸಿದ್ದ ಬೋನಿಗೆ ಬಿದ್ದಿದೆ.

Advertisement

ಶನಿವಾರ ಬೆಳಗಿನ ಜಾವ ಚಿರತೆಯ ಚೀರಾಟ ಕೇಳಿ, ಚಿಲಕಳ್ಳಿ ಗ್ರಾಮಸ್ಥರು ಜಮೀನಿಗೆ ಭೇಟಿ ನೀಡಿದಾಗ ಚಿರತೆ ಬೋನಿನಲ್ಲಿತ್ತು. ತಕ್ಷಣ ಅರಣ್ಯಾಧಿಕಾರಿಗಳಿಗೆ ಸುದ್ದಿ ತಲುಪಿಸಿದ್ದಾರೆ.

ಸ್ಥಳಕ್ಕೆ ಅಗಮಿಸಿದ ಹೆಡಿಯಾಲ ವಲಯ ಅರಣ್ಯ ಅಧಿಕಾರಿಗಳಾದ ಮಂಜುನಾಥ ಹೆಚ್. ಎಂ. ಮತ್ತು ಉಪ ವಲಯ ಅರಣ್ಯ ಅಧಿಕಾರಿಗಳಾದ ಮಹಾಂತೇಶ್ ಕುಂಬಾರ  ಮತ್ತು ರವಿ ಕರೋಳಿ ಮತ್ತು ಸಿಬ್ಬಂದಿಗಳು ಬಂದು   ಚಿರತೆಯನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next