Advertisement

ಚಿರತೆ ಪ್ರತ್ಯಕ್ಷ: ಶಾಸಕ-ಅಧಿಕಾರಿಗಳು ದೌಡು

12:10 PM Oct 14, 2021 | Team Udayavani |

ಹುಮನಾಬಾದ: ತಾಲೂಕಿನ ಹಣಕುಣಿ ಗ್ರಾಮದ ಹೊರವಲಯದಲ್ಲಿ ಚಿರತೆಗಳು ಪ್ರತ್ಯಕ್ಷವಾದ ಹಿನ್ನೆಲೆ ಬುಧವಾರ ಜಿಲ್ಲಾ ಅರಣ್ಯ ಅಧಿಕಾರಿ ಎಸ್‌. ಶಿವಸಂಕರ್‌ ಹಾಗೂ ಸ್ಥಳೀಯ ಶಾಸಕ ರಾಜಶೇಖರ ಪಾಟೀಲ್‌ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.

Advertisement

ಗ್ರಾಮದ ಹೊರವಲಯದ ಕಬ್ಬಿನ ಗದ್ದೆವೊಂದರಲ್ಲಿ ಚಿರತೆ ಹಾಗೂ ಚಿರತೆ ಮರಿ ಪತ್ತೆಯಾಗಿರುವ ಕುರಿತು ಅರಣ್ಯ ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಕೂಡ ಗ್ರಾಮಕ್ಕೆ ಚಿರತೆ ಬಂದಿರುವ ಸುದ್ದಿ ತಿಳಿದು ಆತಂಕದಲ್ಲಿದ್ದಾರೆ. ಹೊಲಗಳ ಕಡೆಗೆ ತೆರಳಲು ರೈತರು ಹೆದರುತ್ತಿದ್ದಾರೆ. ಶೀಘ್ರದಲ್ಲಿಯೇ ಚಿರತೆ ಬಂಧನಕ್ಕೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವಂತೆ ಶಾಸಕರಿಗೆ ಒತ್ತಾಯಿಸಿದರು.

ಇದನ್ನೂ ಓದಿ:  ಅರಸೊತ್ತಿಗೆಯ ನಾಡಹಬ್ಬದಿಂದ ದಸರೆ ವೈಭವದ ಹೆಜ್ಜೆ ಗುರುತುಗಳು

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಅರಣ್ಯ ಅಧಿಕಾರಿ, ಗ್ರಾಮಸ್ಥರು ಹಾಗೂ ರೈತರು ಅತಿ ಹೆಚ್ಚಿನ ಜಾಗೃತಿ ವಹಿಸಬೇಕು. ಸಂಜೆ ಹಾಗೂ ಬೆಳಿಗ್ಗೆ ಅವಧಿಯಲ್ಲಿ ಚಿರತೆಗಳು ಜಾಗೃತವಾಗಿರುತ್ತವೆ. ಉಳಿದ ಅವಧಿಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತವೆ. ಗ್ರಾಮದಲ್ಲಿ ಒಬ್ಬರೇ ಓಡಾಡುವುದು ಮಾಡಬೇಡಿ. ಮಕ್ಕಳು, ದನಕರುಗಳನ್ನು ಹೊಲದ ಕಡೆಗೆ ಸದ್ಯಕ್ಕೆ ತರುವುದನ್ನು ತಪ್ಪಿಸಿ. ಚಿರತೆಗಳ ಬಂಧನಕ್ಕೆ ಸಕಲ ಸಿದ್ಧತೆಗಳು ಮಾಡಿಕೊಂಡಿದ್ದೇವೆ. ಅದರ ಚಲನವಲನಗಳ ಬಗ್ಗೆ ಸತತ ನಿಗಾ ವಹಿಸಲಾಗುತ್ತಿದೆ. ಈಗಾಗಲೇ ಬೋನ್‌ ಕೂಡ ಸಿದ್ಧಪಡಿಸಲಾಗುತ್ತಿದ್ದು, ಆದಷ್ಟು ಬೇಗ ಚಿರತೆ ಬಂಧಿಸಲಾಗುವುದು ಎಂದು ತಿಳಿಸಿದರು.

Advertisement

ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಡಾ| ಚದ್ರಶೇಖರ ಪಾಟೀಲ, ತಾಲೂಕು ಅರಣ್ಯಾಧಿಕಾರಿ ಬಸವರಾಜ ಡಾಂಗೆ, ತಹಶೀಲ್ದಾರ್‌ ನಾಗಯ್ನಾ ಹಿರೇಮಠ, ಕಂದಾಯ ಇಲಾಖೆಯ ಶ್ರೀನಾಥ, ಅರಣ್ಯ ಸಿಬ್ಬಂದಿಗಳಾದ ಸಂತೋಷ ನಾಯ್ಕೊಡೆ, ಅಂಬಾದಾಸ ಪಲಾಟಿ, ಗೊಂಡೆರಾವ ಶಾಖಾ, ರವಿರೂಪ ಸಿಂಗ್‌, ಸಂಜುಕುಮಾರ, ಮಾಳಪ್ಪಾ, ಸಂಗಮೇಶ್ವರ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next