Advertisement

Leopard attack: ದ್ರಾಕ್ಷಿ ತೋಟದಲ್ಲಿದ್ದ ಮೇಕೆ ಬಲಿ

11:54 AM Oct 23, 2023 | Team Udayavani |

ದೊಡ್ಡಬಳ್ಳಾಪುರ: ಚಿರತೆಯೊಂದು ದಾಳಿ ನಡೆಸಿದ ಪರಿಣಾಮ ದ್ರಾಕ್ಷಿ ತೋಟದಲ್ಲಿ ಕಟ್ಟಲಾಗಿದ್ದ ಮೇಕೆ ಸಾವನಪ್ಪಿರುವ ಘಟನೆ ತಾಲೂಕಿನ ಹೊನ್ನಾಘಟ್ಟ ಗ್ರಾಮದ ಹೊರವಲಯದಲ್ಲಿ ಆ.22ರ ಭಾನುವಾರ ಸಂಜೆ ನಡೆದಿದೆ.

Advertisement

ಹೊನ್ನಾಘಟ್ಟ ಗ್ರಾಮದ ಜಗನ್ನಾಥ್ ಎನ್ನುವವರಿಗೆ ಸೇರಿದ ದ್ರಾಕ್ಷಿ ತೋಟದಲ್ಲಿ ಮೇಕೆಯನ್ನು ಕಟ್ಟಿ ಮೇಯಿಸಲಾಗುತ್ತಿದ್ದು, ಈ ವೇಳೆ ಚಿರತೆ ದಾಳಿ ನಡೆಸಿದೆ. ಆದರೆ ಮೇಕೆಯನ್ನು ಕಟ್ಟಿದ್ದ ಕಾರಣ ಎಳೆದೊಯ್ಯಲಾಗದೆ ಅಲ್ಲಿಯೇ ಮೇಕೆ ಕುತ್ತಿಗೆಗೆ ಬಾಯಿ ಹಾಕಿ ರಕ್ತ ಹೀರಿದೆ.

ಇದೇ ಸಂದರ್ಭದಲ್ಲಿ ಮೇಕೆ ಕೂಗಾಟ ಕಂಡು ಮಧು ಎನ್ನುವವರು ಸ್ಥಳಕ್ಕೆ ತೆರಳಿದ್ದು, ಚಿರತೆ ಗಾಬರಿಗೊಂಡು ಪರಾರಿಯಾಗಿದೆ‌.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮುಖಂಡ ತಳಗವಾರ ಪುನೀತ್, ಅನೇಕ ದಿನಗಳಿಂದ ಈ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಕಂಡು ಬರುತ್ತಿದ್ದು, ಅರಣ್ಯ ಇಲಾಖೆಗೆ ದೂರು ನೀಡಿದ್ದರೂ  ಯಾವುದೇ ಕ್ರಮಕೈಗೊಳ್ಳದೇ ಬೇಜವಬ್ದಾರಿಯಿಂದ ವರ್ತಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next