Advertisement

Karwar; ಕಾಡಂಚಿನ ಗ್ರಾಮದಲ್ಲಿ ಚಿರತೆ ದಾಳಿ: ಕರು ಬಲಿ

01:25 PM Jan 13, 2024 | Team Udayavani |

ಕಾರವಾರ: ಕಾರವಾರ ತಾಲೂಕಿನ ಕಾಡಂಚಿನ ಸಿದ್ಧರ ಗ್ರಾಮದಲ್ಲಿ ಎಮ್ಮೆ ಕರುವಿನ ಮೇಲೆ ಚಿರತೆ ದಾಳಿ ಮಾಡಿ ತಿಂದು ಹಾಕಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

Advertisement

ರೈತ ಮನೋಹರ ಗಾಂವ್ಕರ್ ತಮ್ಮ ಮನೆಯ ಹಿಂದೆ ದನದ ಕೊಟ್ಟಿಗಯಲ್ಲಿ ಎಮ್ಮೆ ಕರು ಕಟ್ಟಿದ್ದರು. ಕಾಡಿಗೆ ಹೊಂದಿಕೊಂಡಿರುವ ತೋಟಕ್ಕೆ ಆಹಾರ ಅರಸಿ ಬಂದ ಚಿರತೆ ಎಮ್ಮೆ ಕರುವನ್ನು ತಿಂದು ಹಾಕಿರುವುದು ಶನಿವಾರ ಬೆಳಿಗ್ಗೆ ಮನೋಹರ ಅವರ ಗಮನಕ್ಕೆ ಬಂದಿದೆ.

ಹುಲಿ ದಾಳಿ ಎಂದು ಭಾವಿಸಿದ ಗ್ರಾಮದ ಜನರು ಕಾರವಾರ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರಿಗೆ ಹುಲಿ ದಾಳಿ ಬಗ್ಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಕರುವಿನ ಮೇಲೆ ಚಿರತೆ ದಾಳಿ ಮಾಡಿದೆ ಎಂದು ಖಚಿತ ಪಡಿಸಿದರು‌. ಚಿರತೆ ಹೆಜ್ಜೆಗಳನ್ನು ಅರಣ್ಯ ಸಿಬ್ಬಂದಿ ಗುರುತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next