Advertisement

ರಾತ್ರಿ ವೇಳೆ ಚಿರತೆ ಸಂಚಾರ! ಹಟ್ಟಿಯಲ್ಲಿದ್ದ ಕರುವಿನ ಮೇಲೆ ದಾಳಿ, ಆತಂಕದಲ್ಲಿ ಗ್ರಾಮಸ್ಥರು

06:54 PM Sep 27, 2020 | sudhir |

ಹುಣಸೂರು: ಕೊಟ್ಟಿಗೆಯಲ್ಲಿ ಕಟ್ಟಿದ ಕರುವಿನ ಮೇಲೆ ಶನಿವಾರ ರಾತ್ರಿ ಚಿರತೆಯೊಂದು ದಾಳಿ ನಡೆಸಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಹಬ್ಬೂರಿನಲ್ಲಿ ನಡೆದಿದ್ದು ಇದರಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.

Advertisement

ಗ್ರಾಮದ ನಿವಾಸಿ ಬೀರೇಗೌಡರು ತಮ್ಮ ಕೊಟ್ಟಿಗೆಯಲ್ಲಿ ಕಟ್ಟಿದ ಕರುವಿನ ಮೇಲೆ ರಾತ್ರಿ ಸುಮಾರು ಎರಡು ಗಂಟೆ ಸಮಯದಲ್ಲಿ ಚಿರತೆ ದಾಳಿ ನಡೆಸಿದೆ ದಾಳಿ ನಡೆಸಿದಾಗ ಕರು ಕಿರುಚಾಡುವುದನ್ನು ಕೇಳಿದ ಮನೆ ಮಾಲಿಕ ಬಿರೇಗೌಡರು ಗಾಬರಿಯಿಂದ ಹೊರಬಂದು ನೋಡಿದಾಗ ಚಿರತೆ ಕರುವಿನ ಮೇಲೆ ದಾಳಿ ನಡೆಸುತ್ತಿತ್ತು. ಅವರು ಕೂಗಿಕೊಂಡ ವೇಳೆ ಅಕ್ಕಪಕ್ಕದ ಮನೆಯವರೆಲ್ಲಾ ಸೇರಿ ಕೂಗಾಡಿದ್ದರಿಂದ ಚಿರತೆಯು ಕರುವನ್ನು ಕೊಂದು ಸ್ಥಳದಲ್ಲೇ ಬಿಟ್ಟು ಪಕ್ಕದಲ್ಲೇ ಇರುವ ಶೆಟ್ಟಹಳ್ಲಕಿ ಕಾಡಿನತ್ತ ಪರಾರಿಯಾಗಿದೆ ಎಂದು ಬೀರೇಗೌಡ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಕಾಡುಪ್ರಾಣಿಗಳ ಹಾವಳಿ ತಡೆಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ವಿಫಲರಾಗಿದ್ದು‌ ಚಿರತೆ ಸೆರೆಗೆ ಬೋನಿಡಬೇಕೆಂದು ಅಬ್ಬುರು ಗ್ರಾಮದ ಕುಮಾರ್ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next