Advertisement

ಗಂಗಾವತಿ ಚಿಕ್ಕರಾಂಪೂರ ಹತ್ತಿರ ಎರಡು ಚಿರತೆ, ಮೂರು ಕರಡಿ ಪ್ರತ್ಯಕ್ಷ: ಭಯದಲ್ಲಿ ಜನತೆ

04:11 PM Oct 11, 2020 | keerthan |

ಗಂಗಾವತಿ: ಕಳೆದ ಒಂದು ವಾರದಿಂದ ತಾಲೂಕಿನ ಆನೆಗೊಂದಿ ಅಂಜನಾದ್ರಿ ಕಿಷ್ಕಿಂದಾ ಗುಡ್ಡ ಪ್ರದೇಶದಲ್ಲಿ ಚಿರತೆ ,ಕರಡಿಗಳು ಕಂಡು ಬಂರುತ್ತಿವೆ. ರವಿವಾರ ಬೆಳ್ಳಿಗ್ಗೆ ಅಂಜನಾದ್ರಿ ಬೆಟ್ಟದ ಹತ್ತಿರ ಇರುವ ಚಿಕ್ಕರಾಂಪೂರ ಗ್ರಾಮದ ಗುಡ್ಡದಲ್ಲಿ ಮೂರು ಕರಡಿಗಳು ಮತ್ತು‌ ಎರಡು ಚಿರತೆಗಳು ಪ್ರತ್ಯಕ್ಷವಾಗಿವೆ.

Advertisement

ಕರಡಿ ಮತ್ತು ಚಿರತೆಗಳು ಕಾಣಸಿಕ್ಕಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳ ಜನತೆ ಭಯಭೀತರಾಗಿದ್ದಾರೆ. ಕಳೆದ ಒಂದು ವಾರದಲ್ಲಿ ಜಂಗ್ಲಿ ರಂಗಾಪೂರದಲ್ಲಿ ದನ ಮೇಯಿಸಲು ತೆರಳಿದ್ದ ಮಹಿಳೆ ಹಾಗೂ ಪಾಲಕರ ಜತೆ ವಾಲೀಕಿಲ್ಲಾ ಮೇಗೋಟ್ ಆದಿಶಕ್ತಿ ದೇಗುಲಕ್ಕೆ ಆಗಮಿಸಿದ್ದ ಹೈದ್ರಾಬಾದ್ ಮೂಲದ09 ವರ್ಷದ ಬಾಲಕನ ಕುತ್ತಿಗೆಗೆ ಚಿರತೆ ಕಚ್ಚಿ ಗಾಯಗೊಳಿಸಿತ್ತು. ಈ ಘಟನೆ ಜನರು ಮರೆಯುವ ಮುಂಚೆ ರವಿವಾರ ಬೆಳ್ಳಿಗ್ಗೆ ಚಿಕ್ಕರಾಂಪೂರ ಗ್ರಾಮದ ಗುಡ್ಡದಲ್ಲಿ ಕರಡಿ ಚಿರತೆ ಪ್ರತ್ಯಕ್ಷವಾಗಿವೆ.

ಇದನ್ನೂ ಓದಿ:ಯಳಂದೂರು ಪಟ್ಟಣ ಪಂಚಾಯಿ : ಅಧ್ಯಕ್ಷೆ ಸ್ಥಾನಕ್ಕೆ ನಾಲ್ವರು ಮಹಿಳೆಯರ ಮಧ್ಯೆ ಪೈಪೋಟಿ

ಡಿಎಫ್ ಓ ಭೇಟಿ: ಚಿರತೆ ದಾಳಿ ಹಿನ್ನೆಲೆಯಲ್ಲಿ ತಾಲೂಕಿನ ಆನೆಗೊಂದಿ ಸಾಣಾಪೂರ ಹನುಮನಹಳ್ಳಿ ಜಂಗ್ಲಿ ರಂಗಾಪೂರ ಗುಡ್ಡಪ್ರದೇಶಕ್ಕೆ ಡಿಎಫ್ ಓ ಹರ್ಷಾಭಾನು, ತಾಲೂಕು ಅರಣ್ಯಾಧಿಕಾರಿಗಳು ರವಿವಾರ ಬೆಳ್ಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ಚಿರತೆ ಕರಡಿ ಕಂಡು ಬಂದ ಪ್ರದೇಶದಲ್ಲಿ ಬೋನು ಇಡಲು ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next