Advertisement

ಪದ್ಮಾವತಿ ಚಿತ್ರ ಕುರಿತು ಲೆಹರ್‌ ಸಿಂಗ್‌ ಆಕ್ಷೇಪ

12:50 PM Nov 13, 2017 | Team Udayavani |

ಬೆಂಗಳೂರು: ಶೌರ್ಯದ ಪ್ರತೀಕ, ಧೈರ್ಯ, ಸಂಸ್ಕೃತಿ ಹಾಗೂ ನೈತಿಕ ಮೌಲ್ಯಕ್ಕೆ ಹೆಸರಾಗಿದ್ದ ರಾಣಿ ಪದ್ಮಾವತಿಯನ್ನು ಅರ್ಥಹೀನ ಮತ್ತು ಅಪಮಾನದ ರೀತಿಯಲ್ಲಿ ಬಿಂಬಿಸಿರುವ “ಪದ್ಮಾವತಿ’ ಹಿಂದಿ ಸಿನಿಮಾಕ್ಕೆ ಬಿಜೆಪಿ ಮೇಲ್ಮನೆ ಸದಸ್ಯ ಲೆಹರ್‌ ಸಿಂಗ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

ಪದ್ಮಾವತಿ ಚಿತ್ರದ ಮೂಲಕ ಭಾರತೀಯ ಮಹಿಳೆಯರನ್ನು ನಿಂದಿಸುವ ಪ್ರಯತ್ನ ಮಾಡಿದ್ದಾರೆ. ಭಾರತೀಯ ಇತಿಹಾಸದಲ್ಲಿ ಶೌರ್ಯ ಮೆರೆದಿರುವ ರಾಣಿಯರನ್ನು ಕೆಟ್ಟ ಮತ್ತು ನಕಾರಾತ್ಮಕವಾಗಿ ಚಿತ್ರಿಸಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ಪ್ರವೃತ್ತಿ ಖಂಡನಾರ್ಹ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದಲ್ಲಿ ಈ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬಾರದು. ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿದರೆ ಮುಂದೆ ನಡೆಯಬಹುದಾದ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next