Advertisement

ಉಜಿರೆ ರಬ್ಬರ್‌ ಸೊಸೈಟಿಗೆ ಶಾಸಕರ ಭೇಟಿ

12:04 PM Apr 10, 2020 | mahesh |

ಬೆಳ್ತಂಗಡಿ: ರಬ್ಬರ್‌ ಬೆಳೆಗಾರರ ಹಿತವನ್ನು ಕಾಪಾಡುವ ದೃಷ್ಟಿಯಿಂದ ತಾಲೂಕಿನಲ್ಲಿ ರಬ್ಬರ್‌ ಖರೀದಿಸಲು ಬೆಳ್ತಂಗಡಿ ರಬ್ಬರ್‌ ಸೊಸೈಟಿಗೆ ಅನುಮತಿ ನೀಡಲಾಗಿದ್ದು, ಗುರುವಾರ ಖರೀದಿ ಆರಂಭಗೊಂಡಿದೆ.

Advertisement

ಶಾಸಕ ಹರೀಶ್‌ ಪೂಂಜ ಗುರುವಾರ ಉಜಿರೆ ರಬ್ಬರ್‌ ಸೊಸೈಟಿ ಭೇಟಿ ನೀಡಿ ಮಾಹಿತಿ ಪಡೆದರು. ಉಜಿರೆ ರಬ್ಬರ್‌ ಸೊಸೈಟಿ ಸಿಇಒ ರಾಜು ಶೆಟ್ಟಿ ಬೆಂಗೆತ್ಯಾರು ಮಾಹಿತಿ ನೀಡಿ, ಉಜಿರೆ ಮುಖ್ಯ ಕಚೇರಿಯಲ್ಲಿ 32 ಮಂದಿ ಸದಸ್ಯರು ಮತ್ತು ಗುರುವಾಯನಕೆರೆ ಶಾಖೆಯಲ್ಲಿ 20 ಮಂದಿ ಸದಸ್ಯರಿಂದ ರಬ್ಬರ್‌ ಖರೀದಿಸಲಾಯಿತು ಎಂದು ಅವರು ಹೇಳಿದರು. ಒಟ್ಟು 52 ಸದಸ್ಯರ ಪೈಕಿ ಸುಮಾರು 7 ಲಕ್ಷ ರೂ. ಮೌಲ್ಯದ 5,100 ಕೆ.ಜಿ. ರಬ್ಬರ್‌ ಖರೀದಿಸಲಾಗಿದೆ ಎಂದರು.

ತಲಾ 100 ಕೆ.ಜಿ. ರಬ್ಬರ್‌ ಖರೀದಿಗೆ ಅನುಮತಿ
ಬೆಳ್ತಂಗಡಿ ತಾಲೂಕು ರಬ್ಬರ್‌ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ಅಧ್ಯಕ್ಷರು, ನಿರ್ದೇಶಕರು, ಸಿಬಂದಿಯ ಸಹಕಾರದೊಂದಿಗೆ ಗುರುವಾಯನಕೆರೆ  ಹಾಗೂ ಉಜಿರೆ ಖರೀದಿ ಕೇಂದ್ರಗಳಲ್ಲಿ ಪ್ರತಿ ದಿನ 50 ಬೆಳೆಗಾರರಿಂದ ತಲಾ 100 ಕೆ.ಜಿ. ರಬ್ಬರ್‌ ಖರೀದಿಸಲು ಅನುಮತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next