Advertisement

ದನ ಕಳವಾದ ಮನೆಗಳಿಗೆ ಶಾಸಕ ಭೇಟಿ

12:52 AM Jun 23, 2019 | sudhir |

ಬೈಂದೂರು: ಬೈಂದೂರಿನ ಯಳಜಿತ್‌ದಲ್ಲಿ ದನ ಕಳವಾದ ಸಾಧು ಗೌಡ್ತಿ ಮತ್ತು ಲಕ್ಷ್ಮಿ ಪೂಜಾರಿಯವರ ಮನೆಗೆ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಭೇಟಿ ನೀಡಿದರು.

Advertisement

ಈ ಸಂದರ್ಭ ಮಾತನಾಡಿದ ಅವರು ಈ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಆರಕ್ಷಕ ಇಲಾಖೆ ಎಷ್ಟೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರೂ ಕಳ್ಳತನ ಪ್ರಕರಣ ದಿನದಿಂದ ದಿನಕ್ಕೆ ಅಧಿಕವಾಗುತ್ತಿವೆ. ಮರಳು ದಂಧೆಕೋರರು ಕಂಡ್ಲೂರು ಠಾಣೆಗೆ ಕಲ್ಲು ಹೊಡೆದ ಘಟನೆ, ಗುಲ್ವಾಡಿಯಲ್ಲಿ ಗೋ ಕಳ್ಳರು ಪೊಲೀಸರಮೇಲೆ ಹಲ್ಲೆ ನಡೆಸಿದ ಘಟನೆಯಲ್ಲಿ ಎಲ್ಲ ಆರೋಪಿಗಳು ಜಾಮೀನು ಪಡೆದಿದ್ದಾರೆ. ಮತ್ತೆ ಘಟನೆ ಮರುಕಳಿಸುತ್ತಿದೆ. ಹೀಗಾಗಿ ಆರಕ್ಷಕರು ಇಂತಹ ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ತತ್‌ಕ್ಷಣ ಬಂಧಿಸಬೇಕು ಎಂದರು.

ಜಿ.ಪಂ. ಸದಸ್ಯರಾದ ಬಾಬು ಶೆಟ್ಟಿ, ಶಂಕರ ಪೂಜಾರಿ,ಬಿಜೆಪಿ ಮುಖಂಡ ದೀಪಕ್‌ ಕುಮಾರ್‌ ಶೆಟ್ಟಿ,ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶರತ್‌ ಕುಮಾರ್‌ ಶೆಟ್ಟಿ ಉಪ್ಪುಂದ,ಸುಧಾಕರ ಶೆಟ್ಟಿ ನೆಲ್ಯಾಡಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next