Advertisement

ಕಾಪು, ಕಟಪಾಡಿಗಳಲ್ಲಿ ಸಶಸ್ತ್ರ ಪಡೆಗಳ ಲೆಫ್ಟ್-ರೈಟ್‌! 

07:25 AM Apr 19, 2018 | |

ಕಾಪು/ಕಟಪಾಡಿ/ ಶಿರ್ವ:  ನಿಷ್ಪಕ್ಷಪಾತ, ನಿರ್ಭೀತ ಚುನಾವಣೆ ನಡೆಸುವ ಹಿನ್ನೆಲೆ ಯಲ್ಲಿ ಸಶಸ್ತ್ರ ಪಡೆಗಳಿಂದ ಪಥ ಸಂಚಲನ ನಡೆಸಲಾಯಿತು. 

Advertisement

ಕಟಪಾಡಿಯಲ್ಲಿ ನಡೆದ ಪಥಸಂಚಲನದಲ್ಲಿ ಸುಮಾರು 100 ಬಿಎಸ್‌ಎಫ್ ಯೋಧರು ಮತ್ತು 50 ಮಂದಿ ಪೊಲೀಸ್‌ ಸಿಬ್ಬಂದಿ ಪಾಲ್ಗೊಂಡಿದ್ದರು. ಪಥಸಂಚಲನ ಪಳ್ಳಿಗುಡ್ಡೆ ಮೈದಾನದಿಂದ ಪ್ರಾರಂಭವಾಗಿ ಕಟಪಾಡಿ ಪೇಟೆ-ರಾಷ್ಟೀಯ ಹೆದ್ದಾರಿ- ಶಿರ್ವ ರಾಜ್ಯ ಹೆದ್ದಾರಿ-ಮಣಿಪುರ ಸಂಪರ್ಕ ರಸ್ತೆ ಭಾಗದಲ್ಲಿ ಸಾಗಿ ಮತ್ತೆ ಹೆದ್ದಾರಿ ಮಾರ್ಗವಾಗಿ ಸಾಗಿತ್ತು. 

ಕಾಪುವಿನಲ್ಲಿ ಚುನಾವಣಾ ಸೂಕ್ಷ್ಮ ಪ್ರದೇಶಗಳಾದ ಕಟಪಾಡಿ, ಕಾಪು ಪೇಟೆ,ಉಚ್ಚಿಲ,ಪಡುಬಿದ್ರಿ,ಶಿರ್ವ,ಮುದರಂಗಡಿ, ಮೂಡುಬೆಳ್ಳೆ ಮೊದಲಾದ ಸ್ಥಳಗಳಲ್ಲಿ ಪಥಸಂಚಲನ ನಡೆಸಲಾಯಿತು.ಶಿರ್ವದ ಲ್ಲಿ ಪೆಟ್ರೋಲ್ ಬಂಕ್‌ನಿಂದ ಸಂತ ಮೇರಿ ಕಾಲೇಜಿನವರೆಗೆ ಪಥ ಸಂಚಲನ ನಡೆಯಿತು.

ಕಾಪು ವೃತ್ತ ನಿರೀಕ್ಷಕ ವಿ.ಎಸ್‌.ಹಾಲಮೂರ್ತಿ ರಾವ್‌, ಬಿ.ಎಸ್‌.ಎಫ್‌ ಪಡೆಯ ಇನ್ಸ್‌ಪೆಕ್ಟರ್‌ ವಿನೋದ್‌ ಕುಮಾರ್‌, ಸಬ್‌ ಇನ್ಸ್‌ಪೆಕ್ಟರ್‌ ಪ್ರಶಾಂತ್‌ ಕುಮಾರ್‌ ಶರ್ಮಾ, ಕಾಪು ಠಾಣಾ ಎಸ್‌ಐ ನಿತ್ಯಾನಂದ ಗೌಡ, ಶಿರ್ವ ಠಾಣಾ ಎಸ್‌ಐ ಅಬ್ದುಲ್‌ ಖಾದರ್‌, ಪಡುಬಿದ್ರಿ ಎಸ್‌ಐ ಸತೀಶ್‌, ಕ್ರೆçಂ ಎಸ್‌ಐ ಶೇಖರ್‌, ಗೌರ್‌ ಕುಮಾರ್‌ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next