Advertisement

ಹರತಾಳಕ್ಕೆ ಕರೆ: ಸುಳ್ಯದಲ್ಲಿ  ಬಿಗು ಬಂದೋ ಬಸ್ತ್

02:00 PM Feb 25, 2017 | Team Udayavani |

ಸುಳ್ಯ : ಮಂಗಳೂರಿನಲ್ಲಿ  ಶನಿವಾರ ನಡೆಯಲಿರುವ ಕರಾವಳಿ ಸೌಹಾರ್ದ ರ್ಯಾಲಿಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆಗಮಿಸಲಿದ್ದು, ಈ ಸಂದರ್ಭ ಹಿಂದೂ ಸಂಘಟನೆಗಳು  ಹರತಾಳಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸುಳ್ಯದಲ್ಲಿ  ಬಿಗು ಬಂದೋಬಸ್ತು  ಏರ್ಪಡಿಸಲಾಗಿದೆ.

Advertisement

ಈ ವ್ಯವಸ್ಥೆಗಾಗಿ ಚಿಕ್ಕಮಂಗಳೂರು ಎಸ್ಪಿ ಅಣ್ಣಾಮಲೈ ನೇತೃತ್ವದ ತಂಡವನ್ನು ನಿಯೋಜನೆಗೊಳಿಸಿದ್ದು, ಇದರ ಅಂಗವಾಗಿ ಶುಕ್ರವಾರ ಸುಳ್ಯ ನಗರದಲ್ಲಿ ಪೊಲೀಸ್‌ ಪಥ ಸಂಚಲನ ನಡೆಯಿತು.

ಪಿಎಸ್‌ಐ-8, ಎಎಸ್‌ಐ-11,ಕೆಎಸ್‌ಆರ್‌ಪಿ-60, ನಾಗರಿಕ ಪೊಲೀಸ್‌-60, ಸಂಚಾರಿ ಘಟಕ-15 ಈ ತಂಡವನ್ನು ಸುಳ್ಯ ತಾಲೂಕಿನಾದ್ಯಂತ ಬಂದೋಬಸ್ತ್ಗಾಗಿ ನಿಯೋಜಿಸಲಾಗಿದೆ. ಇದರ ಜತೆಗೆ ಸುಳ್ಯ ಗƒಹರಕ್ಷಕ ದಳ ಸೇರಿಕೊಂಡಿದೆ ಎಂದು ಸುಳ್ಯ ವೃತ್ತ ನೀರಿಕ್ಷಕ ವಿ. ಕೃಷ್ಣಯ್ಯ ಅವರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next