Advertisement

ಸಾವರ್ಕರ್ ವಿಷಯ ಬಿಟ್ಟು, ಪ್ರಸುತ್ತ ಸಮಸ್ಯೆ ಕುರಿತು ಚರ್ಚೆಯಾಗಲಿ : ಸಿದ್ದರಾಮಯ್ಯ ಟ್ವೀಟ್

12:25 PM Oct 22, 2019 | Team Udayavani |

ಬೆಂಗಳೂರು : ಕಳೆದ ಕೆಲ ದಿನಗಳಿಂದ ಸಾವರ್ಕರ್ ಕುರಿತು ನಡೆಯುತ್ತಿರುವ ವಾದ ಪ್ರತಿವಾದಗಳಿಗೆ ಮಾಜಿ ಸಿ.ಎಂ ಹಾಗೂ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಈಗ ಮತ್ತೊಂದು ಟ್ವೀಟ್ ಮೂಲಕ ಬಿಜೆಜಿ ನಾಯಕರಿಗೆ ಟಾಂಗ್  ಕೊಟ್ಟಿದ್ದಾರೆ.

Advertisement

ಟ್ವಟರ್ ನಲ್ಲಿ ಮಹಾರಾಷ್ಟ್ರ ಚುನಾವಣೆಯ ಬಗ್ಗೆ ಹೇಳುತ್ತಾ, ಮುಂದಿನ ಚುನಾವಣೆಯಲ್ಲಿ ಸಾವರ್ಕರ್ ವಿಷಯವನ್ನು ಇಟ್ಟುಕೊಂಡು ಪ್ರಚಾರ ನಡೆಸಿ ಓಟು ಕೇಳಿ ಎಂದು ಬಿಜೆಪಿ ನಾಯಕರಿಗೆ ಪರೋಕ್ಷವಾಗಿ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ. ರಾಜ್ಯದಲ್ಲಿ ಇರುವ ನೆರೆ ಹಾಗೂ ಉದ್ಯೋಗದ ಅಭಾವ ಜೊತೆಗೆ ಆರ್ಥಿಕತೆಯಿಂದ ಬ್ಯಾಂಕ್ ಗಳು ದಿವಾಳಿಯಾಗುತ್ತಿವೆ. ರೈತರು ಸಂಕಷ್ಟದಲ್ಲಿ ದಿನ ಕಳೆಯುತ್ತಿದ್ದಾರೆ.

ಸದ್ಯ ತುರ್ತಾಗಿ ಇವೆಲ್ಲಾ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕೆಂದು ತನ್ನ ಟ್ವೀಟ್ ನಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.

 

 

Advertisement

Advertisement

Udayavani is now on Telegram. Click here to join our channel and stay updated with the latest news.

Next