Advertisement

UPS ಬಿಡಿ, ಒಪಿಎಸ್‌ ಕಥೆ ಏನಾಯಿತು ಹೇಳಿ: ‘ಕೈ’ಗೆ ಬಿಜೆಪಿ ಪ್ರಶ್ನೆ

01:44 AM Aug 26, 2024 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ಗೆ ಚುನಾವಣೆಗಾಗಿ ಭರವಸೆ ನೀಡುವುದು ಮಾತ್ರ ಗೊತ್ತಿದೆ. ತಾವೇ ನೀಡಿದ ಭರವಸೆಯನ್ನು ಕನಿಷ್ಠ ಪ್ರಣಾಳಿಕೆಯಲ್ಲಿ ಘೋಷಿಸುವ ಧೈರ್ಯವೂ ಇಲ್ಲ. ಹಳೆ ಪಿಂಚಣಿ ವ್ಯವಸ್ಥೆ (ಒಪಿಎಸ್‌) ಜಾರಿ ಇದಕ್ಕೆ ನಿರ್ದಶನ ಎಂದು ಮಾಜಿ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ. ಯುಪಿಎಸ್‌ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಯುಪಿಎಸ್‌ನಲ್ಲಿರುವ “ಯು’ ಎಂದರೆ ಅದು ಮೋದಿ ಸರಕಾರದ “ಯು ಟರ್ನ್’ ಎಂದು ಅರ್ಥ ಎಂದು ಟೀಕಿಸಿದ್ದರು. “ಯುಪಿಎಸ್‌ ವಿಚಾರದ ಬಗ್ಗೆ ಕುಹುಕವಾಡುತ್ತಿದ್ದಿರೀ, ಹಿಮಾಚಲ ಪ್ರದೇಶದಲ್ಲಿ ಒಪಿಎಸ್‌ ಜಾರಿ ಮಾಡುವುದಾಗಿ ರಾಹುಲ್‌ ಭರವಸೆ ನೀಡಿದ್ದರು. ಅದನ್ನಾದರೂ ಈಡೇರಿಸಿದರೇ? ಅದರ ಕಥೆ ಏನಾಯಿತು’ ಎಂದು ಪ್ರಶ್ನಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next