Advertisement

ವಿರೋಧ ಪಕ್ಷದ ನಾಯಕನ ಸ್ಥಾನ ಯಾರ ಮನೆ ಬಾಗಿಲಿಗೆ?: ಬಿಜೆಪಿಗೆ ಸವದಿ ಟಾಂಗ್

08:36 PM Jul 12, 2023 | Team Udayavani |

ವಿಧಾನಸಭೆ : ಕಾದು ನೋಡಿ, ವಿರೋಧ ಪಕ್ಷದ ನಾಯಕ ಸ್ಥಾನ ಜೆಡಿಎಸ್ ಮನೆ ಬಾಗಿಲಿಗೆ ಬರುತ್ತದೆ ಎಂದು ಕಾಂಗ್ರೆಸ್ ಶಾಸಕ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿಗೆ ಬುಧವಾರ ಕಲಾಪದಲ್ಲೇ ಟಾಂಗ್ ನೀಡಿದ್ದಾರೆ.

Advertisement

”ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ನಡೆಯುತ್ತಿದ್ದ ಚರ್ಚೆ ವೇಳೆ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರು, ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಸಿದರು. ಆದರೆ ಯಾಕೆ ಇಳಿಸಿದರು ಅನ್ನುವುದು ಗೊತ್ತಿಲ್ಲ.‌ ನರೇಂದ್ರ ಮೋದಿಯವರು ಬಿಟ್ಟರೆ ಯಾರಿಗೂ ಗೊತ್ತಿಲ್ಲ.ಸವದಿ ಅವರು ಉಪ ಮುಖ್ಯಮಂತ್ರಿಯಾಗಿದ್ದರು. ಸವದಿ ಅವರೇ ನಿಮಗಾದರೂ ಗೊತ್ತಾ” ಎಂದು ಪ್ರಶ್ನಿಸಿದರು.

ಉತ್ತರಿಸಿದ ಸವದಿ”ನನಗಿಂತ ಚೆನ್ನಾಗಿ ನಿನಗೇ ಗೊತ್ತು. ನೀವು ಹೇಳುತ್ತಿಲ್ಲ ಅಷ್ಟೇ, ಅದಕ್ಕೆ ಎರಡನೇ ಸೀಟ್ ನಲ್ಲಿ ಯಾರೂ ಕುಳಿತುಕೊಳ್ಳುತ್ತಿಲ್ಲ. ಮೇಲುಗಡೆಯವರು ನನ್ನ ಹಳೆಯ ಫ್ರೆಂಡ್ಸ್ ಇದ್ದಾರೆ, ಅವರೆಲ್ಲ ಹೇಳುತ್ತಿರುತ್ತಾರೆ, ಬಿಜೆಪಿಯವರು ಬಹಳ ಕಚ್ಚಾಡುತ್ತಿದ್ದಾರೆ. ಸರಿಯಾಗಿ ವಿಪಕ್ಷ ಸ್ಥಾನದಲ್ಲಿ ಕುಳಿತು ಕೆಲಸ ಮಾಡುವವರು ಯಾರಾದರೂ ಇದ್ದರೂ ಅದು ಎಚ್.ಡಿ.ಕುಮಾರಸ್ವಾಮಿ ಅವರು ಮಾತ್ರ ಎಂದು . ಕಾದು ನೋಡಿ ವಿಪಕ್ಷ ನಾಯಕ ಸ್ಥಾನ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ” ಎಂದು  ಹೇಳಿದರು.

ಈ ವೇಳೆ ಎಚ್. ಡಿ. ರೇವಣ್ಣ ಮಧ್ಯಪ್ರವೇಶ ಮಾಡಿ, ಸವದಿ ಅವರನ್ನು ಹೊರ ಹಾಕಿದ್ದು ಯಾರು ಅಂತ ಗೊತ್ತಾಗಿಲ್ಲ. ಅವರು ಪಾಪ ಏನು ಮಾಡಿದರು? ಯಾಕೆ ಹೊರಗೆ ಕಳುಹಿಸಿದರು ಗೊತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next