Advertisement

ಲಾಕ್‌ಡೌನ್‌: ಬೀದಿಗೆ ಬಂತು ಛಾಯಾಗ್ರಾಹಕರ ಬದುಕು

06:16 PM Apr 28, 2020 | Suhan S |

ಬೀದರ: ದೇಶದಲ್ಲಿ ತಲ್ಲಣ್ಣ ಸೃಷ್ಟಿಸುತ್ತಿರುವ ಕೋವಿಡ್ 19 ಬಾಧೆ ಛಾಯಾಗ್ರಹಣ ಉದ್ಯಮಕ್ಕೂ ಪೆಟ್ಟು ನೀಡಿದೆ. ಲಾಕ್‌ಡೌನ್‌ದಿಂದಾಗಿ ಮದುವೆ ಸೇರಿ ಶುಭ ಕಾರ್ಯಗಳೆಲ್ಲವೂ ರದ್ದಾಗಿರುವುದರಿಂದ

Advertisement

ಫೋಟೋಗ್ರಾಫಿಯನ್ನೇ ನಂಬಿ ಬದುಕಿನ ಬಂಡಿ ಸಾಗಿಸುತ್ತಿದ್ದ ಜಿಲ್ಲೆಯ ನೂರಾರು ಛಾಯಾಗ್ರಾಹಕರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಜೀವನಕ್ಕಾಗಿ ಕ್ಯಾಮರಾಗಳನ್ನೇ ಮಾರುವ ಸ್ಥಿತಿ ಬಂದಿದೆ. ಫೆಬ್ರವರಿಯಿಂದ ಜೂನ್‌ ತಿಂಗಳು ಮದುವೆ ಸಮಯ. ಕೋವಿಡ್ 19  ಸೋಂಕಿನ ಭೀತಿಯಿಂದ ಮದುವೆ ಸಮಾರಂಭಗಳಿಗೆ ತಡೆ ಬಿದ್ದಿದೆ. ಇದರಿಂದ ವೃತ್ತಿನಿರತ ಛಾಯಾಗ್ರಾಹಕರ ಉದ್ಯಮಕ್ಕೆ ಕೊರೊನಾ ದೊಡ್ಡ ಮಟ್ಟದ ಹೊಡೆತ ನೀಡಿದೆ. ಹಾಗಾಗಿ ಸಭೆ-ಸಮಾರಂಭಗಳಲ್ಲಿ ಚೆಂದದ ಚಿತ್ರಗಳನ್ನು ಸೆರೆ ಹಿಡಿದು ಎಲ್ಲರ ಮುಖದಲ್ಲೂ ನಗು ಅರಳಿಸುತ್ತಿದ್ದ ಛಾಯಾಗ್ರಾಹಕರ ಮುಖದ ಮೇಲಿನ ನಗುವೇ ಮಾಯವಾಗಿದೆ.

ಬದಲಾದ ಕಾಲಘಟ್ಟದಲ್ಲಿ ಫೋಟೋಗ್ರಾಫಿಯೂ ಸಹ ವೈವಿಧ್ಯತೆಗೆ ಒಳಗಾಗುತ್ತಿದೆ. ಸಮಾರಂಭಗಳ ಜತೆಗೆ ಪ್ರೀ ವೆಡ್ಡಿಂಗ್‌ನಂಥ ಫೋಟೋ ಶೂಟ್‌ ಗಳು ಹೆಚ್ಚುತ್ತಿವೆ. ಇದಕ್ಕಾಗಿ ತಂತ್ರಜ್ಞಾನಕ್ಕೆ ತಕ್ಕಂತೆ ಛಾಯಾಗ್ರಾಹಕರು ಉತ್ತಮ ದರ್ಜೆ ಕ್ಯಾಮೆರಾಗಳನ್ನು ಖರೀದಿಸಿದ್ದಾರೆ. ಇದಕ್ಕಾಗಿ ಎರಡೂ¾ರು ಲಕ್ಷ ರೂ. ಬಂಡವಾಳ ಹಾಕಿದ್ದಾರೆ. ಜತೆಗೆ ಪ್ರತ್ಯೇಕವಾದ ಎಲ್‌ ಇಡಿ ಪರದೆ, ಡ್ರೋಣ್‌ ಕ್ಯಾಮರಾ, ಶೂಟಿಂಗ್‌ ಮತ್ತು ಮಿಕ್ಸಿಂಗ್‌ ಯೂನಿಟ್‌ಗಳಿಗೆ ಲಕ್ಷಾಂತರ ರೂ. ಹೂಡಿದ್ದು, ಛಾಯಾಗ್ರಹಣವೂ ಸಹ ಉದ್ಯಮವಾಗಿ ಬೆಳೆದಿದೆ.

ಪ್ರತಿ ವರ್ಷ ಮದುವೆ ಸೀಸನ್‌ ದಿನಗಳಲ್ಲಿ 15-20 ಸಮಾರಂಭಗಳನ್ನು ಮಾಡುತ್ತ ಲಕ್ಷಾಂತರ ರೂಪಾಯಿಗಳ ಉತ್ತಮ ವಹಿವಾಟು ನಡೆಸುತ್ತಿದ್ದ ಛಾಯಾಗ್ರಾಹಕರು ಉಳಿದ ತಿಂಗಳು ನಾಮಕರಣ, ಮನೆ ವಾಸ್ತು, ಜನ್ಮದಿನದಂತಹ ಕಾರ್ಯಕ್ರಮ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅನೇಕ ಯುವಕರ ಉದ್ಯೋಗಕ್ಕೆ ಈ ವ್ಯವಹಾರ ಆಶ್ರಯವೂ ಆಗಿದೆ. ಆದರೆ, ಈಗ ಛಾಯಾಗ್ರಾಹಣ ಉದ್ಯಮಕ್ಕೆ ಕೋವಿಡ್ 19 ಲಾಕ್‌ಡೌನ್‌ ಬರಸಿಡಿಲು ಬಡಿದಂತಾಗಿದ್ದು, ದುಡಿಮೆ ಕಿತ್ತುಕೊಂಡಿದೆ. ಬಹುತೇಕ ಮದುವೆಗಳು ಮುಂದೂಡಲಾಗಿದ್ದರೆ, ಕೆಲವರು ಸರಳವಾಗಿ ದೇವಸ್ಥಾನ, ನೋಂದಣಿ ಕಚೇರಿಯಲ್ಲಿ ಶುಭ ಕಾರ್ಯ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕೈಗೆ ಕೆಲಸವೂ ಇಲ್ಲದೇ, ಇತ್ತ ಗ್ರಾಹಕರಿಗೆ ಮುಂಗಡ ಹಣ ವಾಪಸ್‌ ನೀಡಲು ಸಹ ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ.

ಬೀದರ ನಗರ ಸೇರಿದಂತೆ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಛಾಯಾಗ್ರಾಹಕರಿದ್ದು, ವಿಡಿಯೋ ಮತ್ತು ಫೋಟೋಗ್ರಾಫಿ ವೃತ್ತಿ ರೂಢಿಸಿಕೊಂಡಿದ್ದಾರೆ. 90ಕ್ಕೂ ಹೆಚ್ಚು ಸ್ಟುಡಿಯೋಗಳು ನಡೆಸುತ್ತ ವ್ಯವಹರಿಸುತ್ತಾರೆ. ಕೆಲವರು ಮನೆಯಿಂದಲೇ ಆರ್ಡರ್‌ ತೆಗೆದುಕೊಂಡು ವಹಿವಾಟು ಮಾಡುತ್ತಿದ್ದಾರೆ. ಈಗ ಈ ವೃತ್ತಿಯನ್ನು ನಂಬಿರುವ ಕುಟುಂಬಗಳು ಬೀದಿಗೆ ಬಂದಿವೆ.

Advertisement

ಕೋವಿಡ್ 19  ಸೋಂಕು ಛಾಯಾಗ್ರಾಹಕರ ದುಡಿತಯನ್ನೇ ಕಿತ್ತುಕೊಂಡಿದೆ. ಲಾಕ್‌ಡೌನ್‌ದಿಂದಾಗಿ ಮದುವೆ ಸಮಾರಂಭಗಳು ರದ್ದಾಗಿ ಲಕ್ಷಾಂತರ ರೂ. ನಷ್ಟ ಆಗಿದೆ. ಕಾರ್ಯಕ್ರಮಗಳು ರದ್ದಾಗಿರುವುದರಿಂದ ಗ್ರಾಹಕರು ಕೊಟ್ಟ

ಮುಂಗಡ ಹಣವನ್ನು ಹಿಂದಿರುಗಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಇನ್ನೂ ಕೆಲಸಗಾರರ ಪರಿಸ್ಥಿತಿ ಹೇಳ ತೀರದ್ದಾಗಿದೆ. ಸರ್ಕಾರ ಇಂಥವರ ನೆರವಿಗೆ ಧಾವಿಸಬೇಕಿದೆ.  ಉದಯ ಜೀರ್ಗೆ, ಸ್ಟುಡಿಯೋ ಮಾಲೀಕ

 

-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next