Advertisement

ಲಕ್ಷ್ಮೀ ರೈ ಎಂಗೇಜ್‌ಮೆಂಟ್‌ ಟ್ವಿಸ್ಟ್‌!

07:50 AM Apr 08, 2021 | Team Udayavani |

ಕನ್ನಡ, ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿರುವ ನಟಿ ರಾಯ್‌ ಲಕ್ಷ್ಮೀ (ಲಕ್ಷ್ಮೀ ರೈ) ಇತ್ತೀಚೆಗೆ ತಮ್ಮ ಎಂಗೇಜ್‌ ಮೆಂಟ್‌ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ಒಂದು ಪೋಸ್ಟ್‌ ಹಾಕಿದ್ದರು.

Advertisement

ಈ ಟ್ವೀಟ್‌ ನೋಡಿದ ಅಭಿಮಾನಿಗಳು ರಾಯ್‌ ಲಕ್ಷ್ಮೀಗೆ ಶುಭಾಶಯ ಕೋರುವುದರ ಜೊತೆಗೆ, ಹುಡುಗ ಯಾರು ಎಂದು ಪ್ರಶ್ನಿಸುತ್ತಿದ್ದರು. ಈಗ ಅದಕ್ಕೆ ಲಕ್ಷ್ಮೀ ಉತ್ತರಿಸಿದ್ದಾರೆ.

“ನಿಮ್ಮ ಕೈಗಳನ್ನು ಆಗಾಗ ನೀರಿನಿಂದ ತೊಳೆಯುತ್ತಿರಿ. ಅಗತ್ಯವಿದ್ದಾಗ ಸ್ಯಾನಿಟೈಸರ್‌ ಬಳಸಿ ಎಂಬುದನ್ನು ನಿಮಗೆ ನೆನಪಿಸಲು ನಾನು ಈ ಪೋಸ್ಟ್‌ ಅನ್ನು ಬೇರೊಬ್ಬರಿಂದ ಕದ್ದಿದ್ದೇನೆ’ ಎಂದು ರಾಯ್‌ ಲಕ್ಷ್ಮೀ ಬರೆದುಕೊಂಡಿದ್ದಾರೆ.

ಕೊರೊನಾ ವೈರಸ್‌ ತಡೆಯಲು ಸ್ವತ್ಛತೆ ಬಹಳ ಮುಖ್ಯ. ಹೀಗಾಗಿ, ಜನರಲ್ಲಿ ಅರಿವು ಮೂಡಿಸುವ ಸಲುವಾಗಿ, ಎಂಗೇಜ್‌ಮೆಂಟ್‌ ಅಂತ ಕಥೆ ಹೇಳಿದ್ದೇನೆ ಎಂದು ತಮ್ಮ ಎಂಗೇಜ್‌ಮೆಂಟ್‌ ಸುದ್ದಿಗೆ ಹೊಸ ಟ್ವಿಸ್ಟ್‌ ಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next