Advertisement

ಲಕ್ಷ್ಮೀ ಹೆಬ್ಟಾಳಕರ್‌ಗೆ ಆಮಿಷ ಗೊತ್ತಿತ್ತು: ಪರಮೇಶ್ವರ್‌

06:05 AM Oct 02, 2018 | Team Udayavani |

ಧಾರವಾಡ: “ಪಕ್ಷ ಸೇರ್ಪಡೆ ಬಗ್ಗೆ ಬಿಜೆಪಿಯಿಂದ ಆಹ್ವಾನ ನೀಡುತ್ತಿದ್ದ ವಿಚಾರವನ್ನು ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಟಾಳಕರ್‌ ನನ್ನ ಮುಂದೆ ಕೂಡ ಹೇಳಿದ್ದರು’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದರು. 

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ರಾಜ್ಯದ ಎಲ್ಲ ಮುಖಂಡರು ಕಾಂಗ್ರೆಸ್‌ ಪಕ್ಷದ ವಿದ್ಯಮಾನಗಳನ್ನು ಹೇಳುತ್ತಿದ್ದರು. ಆ ಸಂದರ್ಭದಲ್ಲಿ ಶಾಸಕಿ ಹೆಬ್ಟಾಳಕರ್‌ ಕೂಡ ತಮಗೆ ಬಿಜೆಪಿ ಸೇರಲು ಆಫರ್‌ ಇರುವ ವಿಚಾರವನ್ನು ನನ್ನ ಎದುರು ಹೇಳಿದ್ದರು. 

ಸದ್ಯಕ್ಕೆ ದಿನೇಶ ಗುಂಡೂರಾವ್‌ ಅವರು ಅಧ್ಯಕ್ಷರಾಗಿದ್ದಾರೆ. ಅವರು ಈ ಕುರಿತು ಕ್ರಮ ಕೈಗೊಳ್ಳುತ್ತಾರೆ. ಆದರೆ 30 ಕೋಟಿ ಹಣ ನೀಡುವುದಾಗಿ ಹೇಳಿರುವ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಏಕೆ “ಟ್ರಬಲ್‌ ಶೂಟರ್‌’ ಅಂದಿದ್ದಾರೆ. ಏಕೆ ಆ ಪದ ಬಳಕೆ ಮಾಡಿದ್ದಾರೆ ಅನ್ನೋದೂ ಗೊತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next