Advertisement
ಹೊಸ ಅನುಭವಗಳು ರಾಜಕೀಯ ಜೀವನದಲ್ಲಿ ಅನೇಕ ಮಹತ್ವದ ಹೊಣೆ ಗಾರಿಕೆಗಳು ಲಭಿಸುತ್ತಿದ್ದವು. ಪ್ರತೀ ಜವಾ ಬ್ದಾರಿಯೂ ಹೊಸ ಅನುಭವ ನೀಡಿದ್ದು, ಜನತಾ ಸೇವೆಗೆ ಇದು ಪೂರಕ ವಾಯಿತು. ಸಮಾಜಕ್ಕೆ ತಾನು ಸದಾ ಋಣಿ ಯಾಗಿ ದ್ದೇನೆ ಎಂದರು. ಪ್ರಾಮಾಣಿಕತೆಗೆ ಯಶಸ್ಸು ದೊರೆಯುವುದು ಎಂಬುದನ್ನು ಅನುಭವದಿಂದ ಕಲಿತಿದ್ದೇನೆ. ಸತ್ಯ ಮತ್ತು ನಿಷ್ಠೆ ಸದಾ ಬೆಂಗಾವಲಿಗೆ ಇದ್ದಾಗ ಯಾವುದೇ ಎತ್ತರವನ್ನು ಏರಲು ಸಾಧ್ಯ. ಸಹನೆ, ಸಾಮಾಜಿಕ ಬದ್ಧತೆ, ಕರ್ತವ್ಯಪರತೆ ಈ ನಿಟ್ಟಿನಲ್ಲಿ ಶಕ್ತಿಯಾಗಬೇಕು ಎಂದು ಅವರು ವಿವರಿಸಿದರು.
Related Articles
ಜನಾರ್ದನ ಪೂಜಾರಿ ತಮ್ಮ ಆತ್ಮಕಥನ ಬಿಡುಗಡೆಗೆ ಪೂರ್ವಭಾವಿ ಯಾಗಿ ಅದರ ಕೆಲವು ಪ್ರತಿಗಳನ್ನು ತಲೆಯಲ್ಲಿ ಹೊತ್ತು ಶ್ರೀ ಗೋಕರ್ಣ ನಾಥ ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದರು, ಗೋಕರ್ಣನಾಥನ ಸನ್ನಿಧಿಗೆ ಸಮರ್ಪಿಸಿದರು. ಬಳಿಕ ಸಭಾ ಕಾರ್ಯಕ್ರಮದಲ್ಲಿ ಕೃತಿಯನ್ನು ಬಿಡುಗಡೆ ಗೊಳಿಸಲಾಯಿತು. ಬಿಡುಗಡೆಯಾದ ತತ್ಕ್ಷಣವೇ ಒಂದು ಸಾವಿರ ಪ್ರತಿ ಮಾರಾಟವಾಗಿ ದಾಖಲೆ ಮಾಡಿತು. ಇನ್ನಷ್ಟು ಬೇಡಿಕೆ ಇದ್ದು, ಮುಂದಿನ ಶಿವರಾತ್ರಿಯಂದು ಕ್ಷೇತ್ರದಲ್ಲಿ ಪ್ರತಿಗಳನ್ನು ಒದಗಿಸುವುದಾಗಿ ಪೂಜಾರಿ ಹೇಳಿದರು. ಈ ಹಂತದಲ್ಲಿ ಬೇಡಿಕೆಯ ಸಂಖ್ಯೆ ಸುಮಾರು 20 ಸಾವಿರ ದಾಟಿದೆ!
Advertisement
ರೈಗೆ ಶ್ಲಾಘನೆ: ರಮಾನಾಥ ರೈ ಅವರು ಚೆನ್ನಾಗಿ ಕೆಲಸ ಮಾಡು ತ್ತಿದ್ದಾರೆ. ಮತ್ತಷ್ಟು ಸೇವೆ ಅವರಿಂದ ಸಮಾಜಕ್ಕೆ ದೊರೆಯುವಂತಾಗಲು ಆ ಭಗವಂತನು ಶಕ್ತಿ ನೀಡಲಿ ಎಂದು ಪೂಜಾರಿ ಹೇಳಿದರು.
ಈ ಹುಡುಗ ನನಗೆ ಮೋಸ ಮಾಡಲ್ಲಇಂದಿರಾ ಪ್ರಧಾನಿಯಾದ ಬಳಿಕ ಒಂದು ದಿನ ಮನೆಗೆ ಕರೆದು ಮಾತಿಗಿಳಿದಿದ್ದರು. ಅವರು ಮಾತನಾಡುತ್ತಿದ್ದಾಗ ಸಂಜಯ್ ಗಾಂಧಿ ನಮ್ಮ ಮುಂದೆ ಹೋಗುತ್ತಿದ್ದರು. ಅವರನ್ನು ಕರೆದ ಇಂದಿರಾ ಗಾಂಧಿ, “ಕಮ್ ಹಿಯರ್, ಯು ನೋ ಹೂ ಈಸ್ ದಿಸ್ ಜಂಟಲ್ ಮ್ಯಾನ್’ ಎಂದು ಕೇಳಿದರು. ಸಂಜಯ್ ಗಾಂಧಿ “ಇಲ್ಲ’ ಎಂದರು. “ಹಿ ಈಸ್ ಮಿಸ್ಟರ್ ಜನಾರ್ದನ ಪೂಜಾರಿ. ಅವರು ತುಂಬ ವಿಶ್ವಾಸಾರ್ಹ ವ್ಯಕ್ತಿ. ಕಾಂಗ್ರೆಸ್ಗೆ ಕಮಿಟೆಡ್ ಆಗಿದ್ದಾರೆ. ನೀನು ನನಗೆ ಮೋಸ ಮಾಡ ಬಹುದು. ರಾಜೀವ್ ಮೋಸ ಮಾಡ ಬಹುದು. ಆದರೆ ಈ ಹುಡುಗ ನನಗೆ ಮೋಸ ಮಾಡಲು ಸಾಧ್ಯವಿಲ್ಲ’ ಎಂಬುದಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತಿಳಿ ಸಿದ್ದರು ಎಂಬುದಾಗಿ ಪೂಜಾರಿ ಅವರು ತಮ್ಮ ಆತ್ಮಕಥೆಯಲ್ಲಿ ತಿಳಿಸಿದ್ದಾರೆ. ಊಟಕ್ಕೂ ಗತಿಯಿರಲಿಲ್ಲ !
“ಮಂಗಳೂರಿನ ಬೊಕ್ಕಪಟ್ಣದ ಶಾಲೆಯಲ್ಲಿ ಕಲಿತ ಬಡ ಹುಡುಗ, ತೊಡಲು ಸರಿಯಾದ ಬಟ್ಟೆ ಇರಲಿಲ್ಲ, ತಿನ್ನಲು ಎರಡು ಹೊತ್ತಿನ ಊಟಕ್ಕೂ ಗತಿ ಇರಲಿಲ್ಲ. ಅಂಗಿ ಇಲ್ಲದೆ ಹರಿದ ಚಡ್ಡಿಯಲ್ಲೇ ಶಾಲೆ ಕಲಿತವನು ಲೋಕಸಭೆಯ ಮೆಟ್ಟಿಲೇರಿದೆ. ಅನಂತರದ ನಾಲ್ಕು ವರ್ಷಗಳಲ್ಲೇ ದೇಶದ ಅರ್ಥಖಾತೆಗೆ ಮಂತ್ರಿಯಾದೆ. ಮುಂದಿನ ಬದುಕಿನಲ್ಲಿ ಬಡತನವೇ ನನಗೆ ದೊಡ್ಡ ಪಾಠ ಕಲಿಸಿತು. ಬಡವರ ಕಣ್ಣೀರು ಒರೆಸುವಲ್ಲಿ ನನಗೆ ಹೆಚ್ಚಿನ ಸಹಾಯ ಮಾಡಿತ್ತು’ ಎಂದು ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ. ಸಾಲ ಮೇಳದ ಸಂಗ್ರಾಮವಿಡೀ ಗಮನ ಸೆಳೆಯುವ ವಿಚಾರ ಪೂಜಾರಿ ಅವರ “ಸಾಲ ಮೇಳದ ಸಂಗ್ರಾಮ’ ಬಿಡುಗಡೆಗೆ ಮುನ್ನವೇ ಸಾಕಷ್ಟು ಕುತೂಹಲ, ನಿರೀಕ್ಷೆಗಳನ್ನು ಮೂಡಿಸಿತ್ತು. ಬಿಡುಗಡೆ ಯಾದ ತತ್ಕ್ಷಣ ವೇದಿಕೆಯಲ್ಲೇ ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಪುಸ್ತಕದ ಪ್ರಾರಂಭದಲ್ಲೇ ಪೂಜಾರಿಯವರು “ನನ್ನ ಮಾತು’ ಬರೆದಿದ್ದಾರೆ. ವಕೀಲ ನಾಗಿದ್ದ ತಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದುದಾಗಿ ಮುನ್ನುಡಿ ಯಲ್ಲಿ ಬರೆದುಕೊಂಡಿದ್ದಾರೆ. “ವಕೀಲಿ ವೃತ್ತಿ ಮಾಡುತ್ತಿದ್ದಾಗ ಬಡವರು, ಗೇಣಿದಾರರು, ಪರಿಶಿಷ್ಟ ವರ್ಗ ಮತ್ತು ಜಾತಿಯ ಜನರಿಗೆ ಕೈಲಾದಷ್ಟು ಕಾನೂನು ನೆರವು ನೀಡುವ ಪ್ರಯತ್ನ ಮಾಡಿದ್ದೆ. ಬಡತನದಿಂದ ಶಾಲೆ ಕಲಿತು ಸ್ವಂತ ಕಾಲ ಮೇಲೆ ನಿಲ್ಲುವ ಹೋರಾಟ ನಡೆಸಿದ್ದ ನನಗೆ ಕಷ್ಟಪಟ್ಟು ಕೆಲಸ ಮಾಡುವುದು ತಂದೆಯಿಂದ ಬಂದ ಬಳುವಳಿ. ಸ್ವಂತಕ್ಕಾಗಿ ಯಾರ ಮುಂದೆಯೂ ಕೈ ಚಾಚದಿರುವಂಥ ಮನಃಸ್ಥಿತಿ ನನಗೆ ಬಾಲ್ಯದಿಂದಲೇ ಬಂದದ್ದು’ ಎಂಬುದಾಗಿ ತನ್ನ ಬಾಲ್ಯವನ್ನು ಸ್ಮರಿಸಿಕೊಂಡಿದ್ದಾರೆ. ಖುದ್ದು ಇಂದಿರಾ ಕರೆ: 1969ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಬ್ಯಾಂಕ್ ರಾಷ್ಟ್ರೀಕರಣ ಮಾಡಿದ್ದ ವೇಳೆ ಅವರ ವಕೀಲರೊಂದಿಗೆ ಇಂದಿರಾ ಬಗ್ಗೆ ಮೆಚ್ಚುಗೆಯ ಮಾತು ಆಡುತ್ತಿದ್ದೆ. 1977ನೇ ಇಸವಿ. ನಾನಾಗ ವಕೀಲ ವೃತ್ತಿ ಮಾಡುತ್ತಿದ್ದೆ. ಅದೊಂದು ದಿನ ಕಚೇರಿಯಲ್ಲಿ ಕುಳಿತಿದ್ದಾಗ ದೂರವಾಣಿ ಕರೆ ಬಂತು. ಅದು ಖುದ್ದು ಇಂದಿರಾ ಗಾಂಧಿ ಅವರಿಂದ. “ನಿಮ್ಮನ್ನು ಲೋಕಸಭಾ ಚುನಾವಣೆಗೆ ನಿಲ್ಲಸಬೇಕೆಂದು ಕಾಂಗ್ರೆಸ್ ಪಕ್ಷದಿಂದ ನಿರ್ಧರಿಸಲಾಗಿದೆ. ಆಲ್ ದಿ ಬೆಸ್ಟ್’ಎಂದರು. “ಥ್ಯಾಂಕ್ಯೂ ಮೇಡಂ’ ಎಂದೆ ಎಂಬುದಾಗಿ ಜನಾರ್ದನ ಪೂಜಾರಿ ಅವರು ಆತ್ಮಕಥೆಯಲ್ಲಿ ನಿರೂಪಿಸಿದ್ದಾರೆ. ಪೂಜಾರಿ ಅವರ “ಸಾಲ ಮೇಳದ ಸಂಗ್ರಾಮ’ ಬಿಡುಗಡೆಗೆ ಮುನ್ನವೇ ಸಾಕಷ್ಟು ಕುತೂಹಲ, ನಿರೀಕ್ಷೆಗಳನ್ನು ಮೂಡಿಸಿತ್ತು. ಬಿಡುಗಡೆ ಯಾದ ತತ್ಕ್ಷಣ ವೇದಿಕೆಯಲ್ಲೇ ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಪುಸ್ತಕದ ಪ್ರಾರಂಭದಲ್ಲೇ ಪೂಜಾರಿಯವರು “ನನ್ನ ಮಾತು’ ಬರೆದಿದ್ದಾರೆ. ವಕೀಲ ನಾಗಿದ್ದ ತಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದುದಾಗಿ ಮುನ್ನುಡಿ ಯಲ್ಲಿ ಬರೆದುಕೊಂಡಿದ್ದಾರೆ. “ವಕೀಲಿ ವೃತ್ತಿ ಮಾಡುತ್ತಿದ್ದಾಗ ಬಡವರು, ಗೇಣಿದಾರರು, ಪರಿಶಿಷ್ಟ ವರ್ಗ ಮತ್ತು ಜಾತಿಯ ಜನರಿಗೆ ಕೈಲಾದಷ್ಟು ಕಾನೂನು ನೆರವು ನೀಡುವ ಪ್ರಯತ್ನ ಮಾಡಿದ್ದೆ. ಬಡತನದಿಂದ ಶಾಲೆ ಕಲಿತು ಸ್ವಂತ ಕಾಲ ಮೇಲೆ ನಿಲ್ಲುವ ಹೋರಾಟ ನಡೆಸಿದ್ದ ನನಗೆ ಕಷ್ಟಪಟ್ಟು ಕೆಲಸ ಮಾಡುವುದು ತಂದೆಯಿಂದ ಬಂದ ಬಳುವಳಿ. ಸ್ವಂತಕ್ಕಾಗಿ ಯಾರ ಮುಂದೆಯೂ ಕೈ ಚಾಚದಿರುವಂಥ ಮನಃಸ್ಥಿತಿ ನನಗೆ ಬಾಲ್ಯದಿಂದಲೇ ಬಂದದ್ದು’ ಎಂಬುದಾಗಿ ತನ್ನ ಬಾಲ್ಯವನ್ನು ಸ್ಮರಿಸಿಕೊಂಡಿದ್ದಾರೆ.
ಖುದ್ದು ಇಂದಿರಾ ಕರೆ: 1969ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಬ್ಯಾಂಕ್ ರಾಷ್ಟ್ರೀಕರಣ ಮಾಡಿದ್ದ ವೇಳೆ ಅವರ ವಕೀಲರೊಂದಿಗೆ ಇಂದಿರಾ ಬಗ್ಗೆ ಮೆಚ್ಚುಗೆಯ ಮಾತು ಆಡುತ್ತಿದ್ದೆ. 1977ನೇ ಇಸವಿ. ನಾನಾಗ ವಕೀಲ ವೃತ್ತಿ ಮಾಡುತ್ತಿದ್ದೆ. ಅದೊಂದು ದಿನ ಕಚೇರಿಯಲ್ಲಿ ಕುಳಿತಿದ್ದಾಗ ದೂರವಾಣಿ ಕರೆ ಬಂತು. ಅದು ಖುದ್ದು ಇಂದಿರಾ ಗಾಂಧಿ ಅವರಿಂದ. “ನಿಮ್ಮನ್ನು ಲೋಕಸಭಾ ಚುನಾವಣೆಗೆ ನಿಲ್ಲಸಬೇಕೆಂದು ಕಾಂಗ್ರೆಸ್ ಪಕ್ಷದಿಂದ ನಿರ್ಧರಿಸಲಾಗಿದೆ. ಆಲ್ ದಿ ಬೆಸ್ಟ್’ಎಂದರು. “ಥ್ಯಾಂಕ್ಯೂ ಮೇಡಂ’ ಎಂದೆ ಎಂಬುದಾಗಿ ಜನಾರ್ದನ ಪೂಜಾರಿ ಅವರು ಆತ್ಮಕಥೆಯಲ್ಲಿ ನಿರೂಪಿಸಿದ್ದಾರೆ.