Advertisement

ಲತಾ ಮಂಗೇಶ್ಕರ್ ನೆನಪು ಮಾತ್ರ: ಪ್ರಧಾನಿ ಸೇರಿ ಗಣ್ಯರು ಅಂತಿಮ ವಿಧಿಯಲ್ಲಿ ಭಾಗಿ

07:29 PM Feb 06, 2022 | Team Udayavani |

ಮುಂಬಯಿ : ಇಹಲೋಕ ತ್ಯಜಿಸಿದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆಯನ್ನು ಶಿವಾಜಿ ಪಾರ್ಕ್ ನಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಭಾನುವಾರ ಸಂಜೆ ನಡೆಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಸೇರಿ ಗಣ್ಯರು ಅಂತಿಮ ನಮನ ಸಲ್ಲಿಸಿದರು.

Advertisement

ಅಂತಿಮ ಸಂಸ್ಕಾರವನ್ನು ಹಲವಾರು ಪುರೋಹಿತರು ನಡೆಸಿದರು. ಕುಟುಂಬ ಸದಸ್ಯರು ಅಂತಿಮ ವಿಧಿಗಳನ್ನು ನೆರವೇರಿಸಿ, ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಪತ್ನಿ ರಶ್ಮಿ ಠಾಕ್ರೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಸಚಿನ್ ತೆಂಡೂಲ್ಕರ್,ಶಾರುಖ್ ಖಾನ್ ರಣಬೀರ್ ಕಪೂರ್, ವಿದ್ಯಾ ಬಾಲನ್, ಸೇರಿದಂತೆ ಹಲವು ರಾಜಕಾರಣಿಗಳು, ಖ್ಯಾತನಾಮ ಗಾಯಕರು, ನಟ, ನಟಿಯರು ಶಿವಾಜಿ ಪಾರ್ಕ್‌ಗೆ ಆಗಮಿಸಿ ಲತಾ ಮಂಗೇಶ್ಕರ್ ಅವರ ಅಂತಿಮ ದರ್ಶನ ಪಡೆದರು.

ಸಾವಿರಾರು ಅಭಿಮಾನಿಗಳು ಮರೆಯಾದ ಗಾಯಕಿಗೆ ಅಂತಿಮ ನಮನ ಸಲ್ಲಿಸಿದರು. ಶಿವಾಜಿ ಪಾರ್ಕ್ ಸುತ್ತ ಭಾರಿ ಭದ್ರತೆಯನ್ನು ಕೈಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next