Advertisement

ಲಾಟರಿ ಮೂಲಕ ಲ್ಯಾಪ್‌ಟಾಪ್‌ ವಿತರಣೆ

06:40 AM Oct 20, 2018 | |

ಬೆಂಗಳೂರು: ಎಂಜಿನಿಯರಿಂಗ್‌, ವೈದ್ಯಕೀಯ,ಸರ್ಕಾರಿ ಪದವಿ ಹಾಗೂ ಪಾಲಿಟೆಕ್ನಿಕ್‌ ಕೋಸ್‌ ìಗಳಿಗೆ 2017-18ನೇ ಸಾಲಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಲಾಟರಿ ಮೂಲಕ ಲ್ಯಾಪ್‌ ಟಾಪ್‌ ವಿತರಣೆ. ಅದು ಕೂಡ ಪ್ರತಿ ಕಾಲೇಜಿನಲ್ಲಿ ಇಬ್ಬರಿಗೆ ಮಾತ್ರ.

Advertisement

ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷಕ್ಕಿಂತ ಕಡಿಮೆ ಇರುವ ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡುವುದಾಗಿ ಕಾಂಗ್ರೆಸ್‌ ಸರ್ಕಾರ ಘೋಷಣೆ ಮಾಡಿತ್ತು. ಅದರಂತೆ ಫೆ.27ರಂದು ವಿಧಾನಸೌಧದಲ್ಲಿ ಸಾಂಕೇತಿಕವಾಗಿ ಕೆಲವು ಕಾಲೇಜಿನ ವಿದ್ಯಾರ್ಥಿಗಳಿಗೆ ಒಂದೊಂದು ಹಂಚಿಕೆ ಮಾಡಲಾಗಿತ್ತು. ಇದಾದ ನಂತರ ಎಲ್ಲ ಕಾಲೇಜುಗಳಿಗೂ ಎರಡೆರಡು ಲ್ಯಾಪ್‌ಟಾಪ್‌ ಹಂಚಿಕೆ ಮಾಡಲಾಗಿತ್ತು. ಆದರೆ, ಆ ಎರಡೂ ಲ್ಯಾಪ್‌ಟಾಪ್‌ಗ್ಳನ್ನು ಕಾಲೇಜಿನಿಂದ ವಿದ್ಯಾರ್ಥಿಗಳಿಗೆ ಈವರೆಗೂ ವಿತರಣೆ ಮಾಡಿಲ್ಲ. ಈಗ ವಿತರಿಸುವಂತೆ ಇಲಾಖೆಯೇ ಪ್ರಾಂಶುಪಾಲರಿಗೆ ಸೂಚಿಸಿದೆ. 2017-18ನೇ ಸಾಲಿನಲ್ಲಿ ಪ್ರವೇಶ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನಿಯಮಾನುಸಾರ ಈಗಾಗಲೇ ಲ್ಯಾಪ್‌ಟಾಪ್‌ ವಿತರಿಸಲಾಗಿದೆ. ಆದರೆ, ಎಸ್ಸಿ, ಎಸ್ಸಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಉಳಿದ ಸಮುದಾಯಗಳ ಅರ್ಹ ವಿದ್ಯಾರ್ಥಿಗಳಿಗೆ ಇನ್ನೂ ಲ್ಯಾಪ್‌ಟಾಪ್‌ ವಿತರಿಸಿಲ್ಲ.

ಲಾಟರಿ ಮೂಲಕ ಲ್ಯಾಪ್‌ಟಾಪ್‌: ಎಂಜಿನಿಯರಿಂಗ್‌, ವೈದ್ಯಕೀಯ, ಸರ್ಕಾರಿ ಪದವಿ ಹಾಗೂ ಪಾಲಿಟೆಕ್ನಿಕ್‌ ಕಾಲೇಜಿಗೆ 2017-18ರಲ್ಲಿ ಪ್ರಥಮ ವರ್ಷಕ್ಕೆ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ ವಿತರಣೆಗೆ ಸರ್ಕಾರವೇ ಕೆಲವೊಂದು ಮಾನದಂಡ ನಿಗದಿ ಪಡಿಸಿತ್ತು. ಅರ್ಹತೆ ಹೊಂದಿರುವ ವಿದ್ಯಾರ್ಥಿಗಳ ಪಟ್ಟಿಯನ್ನು ಕಾಲೇಜುಗಳಿಂದ ಇಲಾಖೆಗೆ ನೀಡಲಾಗಿತ್ತು.

ಆದರೆ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಮಾತ್ರ ಸಿಕ್ಕಿಲ್ಲ. ಸರ್ಕಾರದಿಂದ ಒಂದೊಂದು ಕಾಲೇಜಿಗೆ ಎರಡೆರಡು ಲ್ಯಾಪ್‌ಟಾಪ್‌ ಒದಗಿಸಲಾಗಿತ್ತು. ಅದನ್ನು ವಿದ್ಯಾರ್ಥಿಗಳಿಗೆ ಲಾಟರಿ ಮೂಲಕ ಹಂಚುವಂತೆ ಇಲಾಖೆ ಹೊರಡಿಸಿರುವ ಆದೇಶ ವಿದ್ಯಾರ್ಥಿಗಳ ಆಕ್ರೋಶಕ್ಕೆ ಗುರಿಯಾಗಿದೆ.

ಮಾಹಿತಿಯನ್ನೇ ಕೊಟ್ಟಿಲ್ಲ: 2017-18ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಂಚಿಕೆಯಾಗಿರುವ ಲ್ಯಾಪ್‌ಟಾಪ್‌ಗ್ಳ ಮಾಹಿತಿಯನ್ನು ಕೆಲವು ಕಾಲೇಜುಗಳಿಂದ ಸರ್ಕಾರಕ್ಕೆ ನೀಡಿಲ್ಲ. ಲ್ಯಾಪ್‌ ಟಾಪ್‌ ವಿತರಣೆಯ ಮಾಹಿತಿ ವಿತರಿಸಿದ ಕೆಲವೇ ದಿನಾಂಕದೊಳಗೆ ಮಾಹಿತಿ ನೀಡುವಂತೆ ಈ ಹಿಂದೆ ಯೇ ಇಲಾಖೆಯಿಂದ ಸೂಚನೆ ನೀಡಲಾಗಿತ್ತು.

Advertisement

ಆದರೆ, 60 ಸರ್ಕಾರಿ ಪದವಿ ಕಾಲೇಜುಗಳು ಮಾಹಿತಿಯನ್ನೆ ನೀಡಿಲ್ಲ. ಮಾಹಿತಿ ನೀಡಿದ 60 ಕಾಲೇಜುಗಳ ಪಟ್ಟಿಯಲ್ಲಿ ಬೆಂಗಳೂರಿನ ನಾಲ್ಕು ಕಾಲೇಜು, ಮೈಸೂರು, ಮಂಗಳೂರು, ಉಡುಪಿ, ರಾಮನಗರ, ತುಮಕೂರು, ಉತ್ತರ ಕನ್ನಡ,ಕಲಬುರಗಿ, ವಿಜಯಪುರ ಸೇರಿದಂತೆ ಬಹುತೇಕ ಜಿಲ್ಲೆಗಳ ಒಂದೆರಡು ಕಾಲೇಜುಗಳು ಸೇರಿವೆ. ಅ.22ರೊಳಗೆ ಮಾಹಿತಿ ಒದಗಿಸುವಂತೆ ಸಂಬಂಧ ಪಟ್ಟ ಕಾಲೇಜಿನ ಪ್ರಾಂಶುಪಾಲರಿಗೆ ಇಲಾಖೆ ಯಿಂದ ತಾಕೀತು ಮಾಡಲಾಗಿದೆ. ಇಲ್ಲವಾದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next