Advertisement

Kapu ಜನನಾಯಕರಿಗೆ ಭಾಷೆ ಮುಖ್ಯವಲ್ಲ; ಜನಸೇವಾ ಇಚ್ಛಾಶಕ್ತಿ ಸಾಕು: ಪ್ರತಾಪ್‌ ಸಿಂಹ

12:19 AM Apr 22, 2024 | Team Udayavani |

ಕಾಪು: ಜನನಾಯಕರಿಗೆ ಭಾಷೆ ಮುಖ್ಯವಲ್ಲ; ಜನರಿಗೋಸ್ಕರ ಇಚ್ಛಾಶಕ್ತಿಯಿಂದ ಕೆಲಸ ಮಾಡುವ ಶುದ್ಧ ಮನಸ್ಸಿದ್ದರೆ ಸಾಕು. ಕೋಟ ಶ್ರೀನಿವಾಸ ಪೂಜಾರಿ ಅವರು ಭಾಷೆ ಗಿಂತ ಪ್ರೀತಿ ವಿಶ್ವಾಸದಿಂದ ಕೆಲಸ ಮಾಡುವ ಸಜ್ಜನ ರಾಜಕಾರಣಿಯಾಗಿದ್ದಾರೆ ಎಂದು ಮೈಸೂರು ಸಂಸದ ಪ್ರತಾಪ್‌ ಸಿಂಹ ತಿಳಿಸಿದ್ದಾರೆ.

Advertisement

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಪರವಾಗಿ ಕಾಪು ಮಂಡಲ ಬಿಜೆಪಿ ಯುವಮೋರ್ಚಾ ವತಿಯಿಂದ ಕಾಪು ಜನಾದ‌ìನ ದೇವಸ್ಥಾನದ ಕಾಪು ಪೇಟೆಯ ತನಕ ನಡೆದ ರೋಡ್‌ ಶೋ ಕಾರ್ಯ ಕ್ರಮದಲ್ಲಿ ರವಿವಾರ ಭಾಗವಹಿಸಿ ಅವರು ಮಾತನಾಡಿದರು.

ಕರಾವಳಿ ಜನರ ಅನುಕೂಲಕ್ಕಾಗಿ ಮಂಗಳೂರಿನಿಂದ ಬೆಂಗಳೂರಿಗೆ ವಂದೇ ಭಾರತ್‌ ರೈಲನ್ನು ತರುವಲ್ಲಿ ಕೋಟ ಅವರೊಂದಿಗೆ ನಾನು ಅವರ ಪಿಎ ಆಗಿ ಕೈಜೋಡಿಸಿ ಕೆಲಸ ಮಾಡುತ್ತೇನೆ. ಲೋಕಸಭೆಯಲ್ಲಿ ಮೋದೀಜಿ ಪರವಾಗಿ ಕೈಎತ್ತಲು ಕರಾವಳಿಯ ಬಿಜೆಪಿ ಅಭ್ಯರ್ಥಿಗಳಾದ ಕೋಟ ಮತ್ತು ಚೌಟ ಅವರನ್ನು ಆರಿಸಿ ಕಳುಹಿಸಬೇಕು ಎಂದರು.

ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಮಾತನಾಡಿ, ಸರಳ ಸಜ್ಜನ ರಾಜಕಾರಣಿ ಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸಂಸದರಾಗಿ ಆರಿಸಿದಲ್ಲಿ ಬಡತನ ವನ್ನು ಕಂಡಿರುವ ಕೋಟ ಬಡವರ ಕಣ್ಣೀರನ್ನು ಒರೆಸುವ ಕೆಲಸ ಮಾಡಲಿದ್ದಾರೆ ಎಂದರು.

ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಯಾವುದೇ ಕಾರ್ಯಕರ್ತನಿಗೆ ತೊಂದರೆಯಾದಲ್ಲಿ ನಾನು ಮತ್ತು ಈ ಭಾಗದ ಶಾಸಕರೆಲ್ಲಾ ಒಂದಾಗಿ ಹೋರಾಟ ನಡೆಸಿ ನ್ಯಾಯಕೊಡಿಸಲಿದ್ದೇವೆ ಎಂದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next