Advertisement

ಚಂದ್ರದ್ರೋಣ ಗಿರಿಶ್ರೇಣಿಯಲ್ಲಿ ನಿರಂತರ ಭೂಕುಸಿತ: ರಸ್ತೆ ಸಂಚಾರ ಅಸ್ತವ್ಯಸ್ತ

03:26 PM Jul 10, 2022 | Team Udayavani |

ಚಿಕ್ಕಮಗಳೂರು: ಮಲೆನಾಡಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಚಿಕ್ಕಮಗಳೂರು ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ಚಂದ್ರದ್ರೋಣ ಗಿರಿಶ್ರೇಣಿಯಲ್ಲಿ ನಿರಂತರ ಭೂಕುಸಿತ ಉಂಟಾಗುತ್ತಿದೆ.

Advertisement

ಚಿಕ್ಕಮಗಳೂರು ಇನಾಂ ದತ್ತಾತ್ರೇಯ ಪೀಠ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು ರಸ್ತೆಯ ಮುಕ್ಕಾಲು ಭಾಗಕ್ಕೆ ಕುಸಿದ ಗುಡ್ಡ ಬಿದ್ದಿದೆ. ಕಾರು- ಬೈಕ್ ಹೊರತು ಪಡಿಸಿ ಭಾರೀ ವಾಹನಗಳ ಸಂಚಾರ ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಮುಳ್ಳಯ್ಯನಗಿರಿ ಕಡೆ ಹೋಗಿದ್ದ ಪ್ರವಾಸಿಗರು ನಿರಾಸೆಯಿಂದ ಹಿಂದುರುಗಿತ್ತಿದ್ದಾರೆ. ಇನಾಂ ದತ್ತಾತ್ರೇಯ ಪೀಠ ರಸ್ತೆಯ ಮೂರು – ನಾಲ್ಕು ಕಡೆ ರಸ್ತೆಗೆ ಮರಗಳು ಉರುಳಿದೆ. ರಸ್ತೆಯ ಮೇಲೆ ನೀರು ಹರಿಯುತ್ತಿದೆ.

ಇದನ್ನೂ ಓದಿ:ಚಿಕ್ಕಮಗಳೂರಿನಲ್ಲಿ ಮುಂದುವರೆದ ಮಳೆ: 6 ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ

Advertisement

ಪ್ರವಾಸಿಗರ ವಾಹನಗಳಿಂದಲೇ ಟ್ರಾಫಿಕ್ ಜಾಮ್ ಆಗುತ್ತಿದ್ದ ರಸ್ತೆಯಲ್ಲಿ ಮಳೆ‌ ನೀರು, ಕಲ್ಲಿನ ರಾಶಿ ಬಿದ್ದಿದೆ. ಮಳೆ ಗುಡ್ಡ ಕುಸಿತ ಕಂಡ ಹಲವಾರು ಪ್ರವಾಸಿಗರು ತಮ್ಮ ಪ್ರವಾಸವನ್ನು ಮಟಕುಗೊಳಿಸಿ ಊರಿಗೆ ತೆರಳಿದ್ದಾರೆ. ಗಿರಿಶ್ರೇಣಿಯಲ್ಲಿ ಇನ್ನಷ್ಟು ಕಡೆ ಮಣ್ಣು ಕುಸಿಯುವ ಆತಂಕ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next