Advertisement

ರಸ್ತೆ ಕಾಮಗಾರಿಗೆ ಭೂಮಿಪೂಜೆ

01:10 PM May 31, 2020 | Suhan S |

ರಾಣಿಬೆನ್ನೂರ: ಪ್ರಧಾನಿ ಮೋದಿಯವರ ಜನಪರ ಕಾರ್ಯದಿಂದ ಎರಡನೇ ಬಾರಿಗೆ ಎರಡನೇ ವರ್ಷಕ್ಕೆ ಕೇಂದ್ರ ಸರ್ಕಾರ ಪಾದಾರ್ಪಣೆ ಮಾಡುತ್ತಿದೆಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

Advertisement

ತಾಲೂಕಿನ ಕುದರಿಹಾಳ ಗ್ರಾಮದಲ್ಲಿ 15ನೇ ಹಣಕಾಸು ಯೋಜನೆಯಡಿ 10ಲಕ್ಷ ರೂ.ಗಳ ಅನುದಾನದಲ್ಲಿ ಕಾಂಕ್ರೀಟ್‌ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದಅವರು, ಗ್ರಾಮ ಅಭಿವೃದ್ಧಿಯಾದಲ್ಲಿ ದೇಶ ಅಭಿವೃದ್ಧಿ ಪತದತ್ತ ಸಾಗಲು ಸಾಧ್ಯವಾಗಲಿದೆ ಎಂದರು.

ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ, ಸದಸ್ಯೆ ಪಾರಮ್ಮ ಲಮಾಣಿ, ಜಿಪಂ ಸದಸ್ಯ ಮಾರುತಿ ರಾಠೊಡ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಪಿಡಿಓ ರಂಗಪ್ಪ ಕೊರಕಲಿ, ಮಂಜುನಾಥ ಓಲೇಕಾರ, ಬಸವರಾಜ ಹುಲ್ಲತ್ತಿ, ವಿಶ್ವನಾಥ ಪಾಟೀಲ, ದೀಪಕ ಹರಪನಹಳ್ಳಿ, ರಾಘವೇಂದ್ರ ಕುಲಕರ್ಣೀ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next