Advertisement

ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ

01:27 PM Oct 07, 2019 | Team Udayavani |

ಗಂಗಾವತಿ: ಪವಿತ್ರ ಕ್ಷೇತ್ರ ಬೂದೇಶ್ವರ ದೇಗುಲಕ್ಕೆ ಒಂದು ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು. ಅವರು ರವಿವಾರ ಬೂದಗುಂಪಾ ಹತ್ತಿರದ ಬೂದೇಶ್ವರ ದೇಗುಲದ ಹತ್ತಿರ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

Advertisement

ಬೂದೇಶ್ವರ ದೇಗುಲವನ್ನು ಮಾಜಿ ಸಂಸದ ಎಚ್‌.ಜಿ. ರಾಮುಲು ಕುಟುಂಬದವರು ನಿರ್ಮಿಸಿದ್ದು, ಪ್ರತಿದಿನ ಇಲ್ಲಿಗೆ ಭಕ್ತರು ಆಗಮಿಸುವುದರಿಂದ ರಸ್ತೆ ಉತ್ತಮವಾಗಿ ನಿರ್ಮಿಸಬೇಕಿದೆ. ತಮ್ಮ ಶಾಸಕರ ನಿಧಿ ಯಿಂದ ಕೋಟಿ ರೂ. ಗಳನ್ನು ರಸ್ತೆ ನಿರ್ಮಾಣಕ್ಕೆ ಮೀಸರಿಸಲಾಗಿದ್ದು, ಕಾಮಗಾರಿ ರಾಷ್ಟ್ರೀಯ ಹೆದ್ದಾರಿಯಿಂದ ಬೂದೇಶ್ವರ ದೇಗುಲದ ಸುತ್ತ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗುತ್ತದೆ ಎಂದರು. ಸಂಸದ ಕರಡಿ ಸಂಗಣ್ಣ, ಮಾಜಿ ಸಂಸದ ಎಚ್‌.ಜಿ. ರಾಮುಲು, ಪಂಚಮಸಾಲಿ ಸಮಾಜದ ಕಳಕನಗೌಡ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next