Advertisement

Kumble: ಲಾರಿಗಳಲ್ಲಿ ಮಣ್ಣು ಸಾಗಾಟ ಸ್ಥಳೀಯರಿಂದ ತಡೆ, ದಂಡ ವಸೂಲಿ

12:44 AM Nov 03, 2023 | Team Udayavani |

ಕುಂಬಳೆ: ಅನಂತಪುರ ದೇವರಗುಡ್ಡೆಯಿಂದ ಅನುಮತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಸಾಗಿಸುತ್ತಿದ್ದ ಲಾರಿಗಳನ್ನು ತಡೆ ಹಿಡಿದ ಸ್ಥಳೀಯರು ಅದನ್ನು ಕುಂಬಳೆ ಪೊಲೀಸರಿಗೊಪ್ಪಿಸಿದರು. ಕುಂಬಳೆ ಪೊಲೀಸರು ಸ್ಥಳಕ್ಕೆ ತೆರಳಿ 4 ಲಾರಿಗಳನ್ನು ವಶಕ್ಕೆ ತೆಗೆದುಕೊಂಡರು. ಬಳಿಕ ಅದನ್ನು ವೇಯಿಂಗ್‌ ಮೆಶಿನ್‌ನಲ್ಲಿ ತೂಕ ಮಾಡಿದಾಗ ಒಂದೊಂದು ಲಾರಿಯಲ್ಲಿ 4 ಟನ್‌ಗಿಂತಲೂ ಹೆಚ್ಚು ಮಣ್ಣು ಪತ್ತೆಯಾಗಿದೆ. ಬಳಿಕ 70 ಸಾವಿರ ರೂ. ದಂಡ ವಸೂಲಿ ಮಾಡಿ ಮಣ್ಣನ್ನು ತೆಗೆದ ಸ್ಥಳದಲ್ಲೇ ತಂದು ಹಾಕಲಾಗಿದೆ.

Advertisement

ಲಾರಿಯನ್ನು ಸೂಕ್ತ ಸಮಯದಲ್ಲಿ ಕಸ್ಟಡಿಗೆ ತೆಗೆದ ಕುಂಬಳೆ ಪೊಲೀಸರನ್ನು ಅನಂತಪುರ ಕ್ರಿಯಾ ಸಮಿತಿ ಅಭಿನಂದಿಸಿದೆ. ಇದೇ ವೇಳೆ ಮೋಟಾರು ವಾಹನ ಇಲಾಖೆಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ತಲುಪದ ಬಗ್ಗೆ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next