Advertisement

ಯಲ್ಲಾಪುರ : ಕೆಲಸ ಮಾಡುತ್ತಿದ್ದ ವೇಳೆ ಮಣ್ಣು ಕುಸಿದು ನಾಲ್ವರ ಸಾವು

12:47 AM Mar 09, 2021 | Team Udayavani |

ಯಲ್ಲಾಪುರ: ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಮಣ್ಣು ಕುಸಿದು ನಾಲ್ವರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಇಡಗುಂದಿ ಸಮೀಪದ ಸಂಪೆಬೈಲ್‌ನಲ್ಲಿ ಸಂಭವಿಸಿದೆ.

Advertisement

ಕಿರವತ್ತಿ ಸಮೀಪದ ಹೊಸಳ್ಳಿಯ ವರಾದ ಲಕ್ಷ್ಮೀ ದೋಯಪುಡೆ (38), ಭಾಗ್ಯಶ್ರೀ ಎಡಗೆ (21), ಸಂತೋಷ ದೋಯಿಪುಡೆ (18) ಹಾಗೂ ಮಳ್ಳು ದೋಯಿಪುಡೆ (21) ಮೃತಪಟ್ಟವರು. ಇವರೊಂದಿಗಿದ್ದ ಇತರ ಮೂವರು ಕಾರ್ಮಿಕರು ಪಾರಾಗಿದ್ದಾರೆ.

ಪೊಲೀಸರು ಹಾಗೂ ಅಗ್ನಿಶಾಮಕ ಸಿಬಂದಿ ಮೃತದೇಹವನ್ನು ಹೊರತೆಗೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next