Advertisement

ಜಮೀನು ವಿಭಾಗ ಪತ್ರ ನೋಂದಣಿಗೆ ಲಾಕ್‌ಡೌನ್‌ ಕುತ್ತು

01:48 AM Jul 01, 2020 | Hari Prasad |

ಬೆಳ್ತಂಗಡಿ: ರೈತರು ತಮ್ಮ ಜಮೀನಿನ ವಿಭಾಗ ಪತ್ರ ನೋಂದಣಿಗೆ ಸರ್ವೇ ಇಲಾಖೆಯಿಂದ ಪಡೆದ 11 ಇ ನಕ್ಷೆಗಳ ಕಾಲಮಿತಿ ಮುಗಿದುದರಿಂದ ಅವರು ದುಬಾರಿ ಶುಲ್ಕ ಪಾವತಿಸಿ ಮತ್ತೂಮ್ಮೆ ಅಳತೆ ಮಾಡಿಸಬೇಕಾದ ಸಂಕಷ್ಟಕ್ಕೆ ಸಿಲುಕಿದ್ದಾರೆ.

Advertisement

ಸತತ ಎರಡು ತಿಂಗಳು ಲಾಕ್‌ ಡೌನ್‌ ಇದ್ದುದರಿಂದ ಸರಕಾರಿ ಕೆಲಸಗಳು ಮಂದಗತಿಯಲ್ಲಿವೆ. ಈ ನಡುವೆ ಭೂ ಪರಭಾರೆಗೆ ಪಡೆದ 11ಇ ನಕ್ಷೆ ನೋಂದಣಿಗೆ ಸರ್ವೇ ಇಲಾಖೆ ಕೇವಲ 1 ತಿಂಗಳ ವಿನಾಯಿತಿ ನೀಡಿತ್ತು.

ಈ ಅವಧಿಯಲ್ಲಿ ಇದಕ್ಕಾಗಿ ಸರ್ವೇ ಇಲಾಖೆ ಟೋಕನ್‌ ವ್ಯವಸ್ಥೆ ಆರಂಭಿಸಿತ್ತು. ಹೆಚ್ಚಿನ ಮಂದಿ ದೂರದೂರಿನಲ್ಲಿ ಸಿಲುಕಿದ್ದು, ವಿನಾಯಿತಿ ಅವಧಿ ವಿಸ್ತರಿಸುವುದು ಅಗತ್ಯವಾಗಿತ್ತು.

ಪ್ರತೀ ಸರ್ವೇ ನಂ.ಗೆ 1,200 ರೂ.
ಈ ಮಧ್ಯೆ ಸರ್ವರ್‌ ಸಮಸ್ಯೆ ಮತ್ತಿತರ ತೊಂದರೆ ಎದುರಾದ್ದರಿಂದ ಈಗಾಗಲೇ ಅರ್ಜಿ ಸಲ್ಲಿಸಿದವರ ಕಾಲಮಿತಿ ಮುಗಿದಿದೆ. ವಿನಾಯಿತಿ ಅವಧಿ ವಿಸ್ತರಿಸದೆ ಇರುವುದರಿಂದ ಕಾಲಮಿತಿ ಮುಗಿದಿರುವ ರೈತರು ಒಂದು ಸರ್ವೇ ನಂಬರಿಗೆ 1,200 ರೂ.ಗಳಂತೆ ಪಾವತಿಸಿ ಮತ್ತೂಮ್ಮೆ ಅಳತೆಗೊಳಪಡಿಸಿ ಹೊಸ ನಕ್ಷೆ ತಯಾರಿಸಿಕೊಳ್ಳಬೇಕಾದ ಅನಿವಾರ್ಯತೆ ಒದಗಿದೆ.

ನೋಂದಣಿ ಮೇಯಲ್ಲಿ ಆರಂಭಗೊಂಡರೂ ವೇಗವಾಗಿ ಆಗುತ್ತಿಲ್ಲ. ಪ್ರಸ್ತುತ ಜನರು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ನೋಂದಣಿ ಕಚೇರಿಗೆ ಸ್ಕಾ éನ್‌ ಮಾಡಿದ ದಸ್ತಾವೇಜು ಪ್ರತಿ ಇಮೇಲ್‌ ಮಾಡಿ, ಬಳಿಕ ಉಪನೋಂದಣಾಧಿಕಾರಿಗಳು ನಿಗದಿಪಡಿಸಿದ ದಿನ ಕಡತ ಹಾಜರುಪಡಿಸಿ ನೋಂದಣಿ ಮಾಡಿಸಿಕೊಳ್ಳಬೇಕು. ಈ ಪ್ರಕ್ರಿಯೆಗೆ ಕನಿಷ್ಠ ಎರಡು ವಾರ ತಗಲುತ್ತದೆ.

Advertisement

ತಮ್ಮದಲ್ಲದ ತಪ್ಪಿನಿಂದ ಜನರಿಗೆ ಸಂಕಷ್ಟ
ಸರಕಾರವು ಎಲ್ಲ  ಕ್ಷೇತ್ರಗಳಲ್ಲಿ  ಕನಿಷ್ಠ 3 ತಿಂಗಳ ವಿನಾಯಿತಿ ಘೋಷಿಸಿದ್ದರೂ ಸರ್ವೇ ಇಲಾಖೆ ವ್ಯಾಪ್ತಿಗೆ ಕೇವಲ ಒಂದು ತಿಂಗಳು ಮಿತಿಗೊಳಿಸಿದೆ. ವಿನಾಯಿತಿ 3 ತಿಂಗಳು ಇದ್ದರೂ ಕೆಲವು ಕಡತಗಳಿಗೆ ಒಂದು ತಿಂಗಳ ಅವಧಿ ಸೂಚಿಸುತ್ತಿದೆ. ಈ ಕುರಿತು ಉಪನೋಂದಣಾಧಿಕಾರಿಗಳಿಗೂ ಸಮರ್ಪಕ ಮಾಹಿತಿ ಇಲ್ಲ.

ಇಲಾಖೆ ಈ ಬಗ್ಗೆ  ಸಾರ್ವಜನಿಕ ಪ್ರಕಟನೆ ನೀಡದಿರುವುದರಿಂದ ರೈತರಿಗೆ ಮಾಹಿತಿ ಲಭಿಸಿಲ್ಲ. ಇಲಾಖೆಯ ಈ ಕ್ರಮದಿಂದ 11ಇ ನಕ್ಷೆ ಪಡೆದು ಲಾಕ್‌ ಡೌನ್‌ನಿಂದಾಗಿ ನೋಂದಣಿಗೆ ಬಾಕಿಯಾಗಿರುವ ಎಲ್ಲ ಕಡತಗಳ ವಿಚಾರದಲ್ಲಿ ಜನರು ತಮ್ಮದಲ್ಲದ ತಪ್ಪಿಗೆ ದುಬಾರಿ ಮೊತ್ತ ತೆತ್ತು ಮತ್ತೆ ಅಳತೆ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ. ಇದರಿಂದ ಬ್ಯಾಂಕ್‌ ವ್ಯವಹಾರ, ಜಮೀನು ವಿಭಾಗ ಪರಭಾರೆಗೂ ಹೊಡೆತ ಬಿದ್ದಿದೆ.

ಆರಂಭದಲ್ಲಿ  11ಇ ನಕ್ಷೆ ಪಡೆದು ನೋಂದಣಿಗೆ 6 ತಿಂಗಳ ಅವಧಿ ನೀಡಲಾಗಿತ್ತು. ಕೋವಿಡ್‌ ಕಾರಣದಿಂದ ಮೂರು ತಿಂಗಳ ಹೆಚ್ಚುವರಿ ಅವಧಿ ನೀಡಲಾಗಿದೆ. ಈ ಮಧ್ಯೆಯೂ ತಾಂತ್ರಿಕ ದೋಷದಿಂದ ನೋಂದಣಿಗೆ ಬಾಕಿ ಉಳಿದಿರುವ ಕಡತಗಳಿದ್ದಲ್ಲಿ  ಮತ್ತೂಮ್ಮೆ  ಪರಿಶೀಲಿಸಲು ಉಪನೋಂದಣಾಧಿಕಾರಿಗಳಿಗೆ ಸೂಚಿಸುತ್ತೇನೆ.
– ಶ್ರೀಧರ್‌ ಹೆಚ್ಚುವರಿ ನಿರ್ದೇಶಕರು, ಸರ್ವೇ ಇಲಾಖೆ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next